ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೆವೆಂತ್ ಡೆ ಅಡ್ವೆಂಟಿಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ, ನಗರದ ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು ರ್ಯಾಲಿ ನಡೆಸಿದರು.
ತಂಬಾಕು ಮುಕ್ತ, ಮದ್ಯಸೇವೆನೆ, ಗಾಂಜಾ, ಡ್ರಗ್ಸ್ ನಂತಹ ಮಾರಕ ಚಟಗಳಿಂದ ದೂರವಿರಿ ಆರೋಗ್ಯ ಕಾಪಾಡಿಕೊಳ್ಳಿ ಎಂದು, ಈ ಶಾಲೆಯ ಮಕ್ಕಳು ಕೇಶ್ವಾಪುರ ಸರ್ಕಲ್, ದೇಶಪಾಂಡೆ ನಗರ, ಕುಸಗಲ್ ರೋಡ್ ಸೇರಿದಂತೆ ನಗರದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ರ್ಯಾಲಿ ಮಾಡಿದರು. ಇದಕ್ಕೆ ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾನೆನಳ್ಳಿ ಚಾಲನೆ ನೀಡಿದ್ದು, ಪೊಲೀಸರು ಕೂಡ ಈ ಜಾಗೃತಿ ರ್ಯಾಲಿಗೆ ಸಾಥ್ ನೀಡಿದ್ದಾರೆ.