ನವಲಗುಂದ: ಪಟ್ಟಣದ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮಗೆ ಲ್ಯಾಪ್ಟಾಪ್ ಅಥವಾ ಟ್ಯಾಬ್ ನೀಡಲು ತಹಶೀಲ್ದಾರ್ ಸುಧೀರ ಸಾಹುಕಾರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗ ಸರಕಾರ ಎಲ್ಲಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅಥವಾ ಟ್ಯಾಬ್ ನೀಡುತ್ತಿತ್ತು. ಅವರ ನಂತರ ಬಂದ ಸರಕಾರ ಈ ಸೌಲಭ್ಯ ನಿಲ್ಲಿಸಿದರು. ವಿದ್ಯಾರ್ಥಿಗಳ ಉನ್ನತ ಜ್ಞಾನ ಅಭಿವೃದ್ಧಿಗೊಳಿಸುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಸೌಲಭ್ಯ ಮರಳಿ ಆರಂಭಿಸಬೇಕು ಮತ್ತು 2023-24 ನೇ ಸಾಲಿನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಚಂದ್ರಶೇಖರ ಕಂಬಳಿ, ವಿನಾಯಕ ಯಾವಗಲ್, ಕಲ್ಲಪ್ಪ ಮುಧೋಳ, ಪ್ರವೀಣ ಹಿರೇಮಠ, ಸಿದ್ದು ಕಿಲಾರಿ, ಬಾಷಾ ಸನ್ನೂಬಾಯಿ, ವಸಂತ ಚಿಮ್ಮನಕಟ್ಟಿ, ಹನಮಂತ್ತ ತಳವಾರ, ಪ್ರದೀಪ ಕೌಜಗೇರಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.