News Karnataka Kannada
Thursday, May 09 2024
ಹುಬ್ಬಳ್ಳಿ-ಧಾರವಾಡ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿಲ್ಲ : ಬಿ.ಕೆ. ಹರಿಪ್ರಸಾದ್

Prime Minister Narendra Modi's government is not working for the poor.
Photo Credit : News Kannada

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿಲ್ಲ. ರಾಷ್ಟ್ರದ ಹಿತದಿಂದ ಕೆಲಸ ಮಾಡುತ್ತಿಲ್ಲ. ಕೇವಲ ಅವರ ಹಿಂಬಾಲಕರ ಅನುಕೂಲಕ್ಕೆ, ಅವರಿಗೆ ಅನುಕೂಲ ರೀತಿಯಲ್ಲಿ ಕಾನೂನು ತಿದ್ದುಪಡೆ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಅದಾನಿ ಅವರ 8 ದಶಲಕ್ಷ ಕೋಟಿ ಲಕ್ಷ ಬಂಡವಾಳ ಇತ್ತು. 8 ವರ್ಷಗಳಲ್ಲಿ 140 ದಶಲಕ್ಷ ಕೋಟಿ ಹೇಗೆ ಮಾಡಿದರು ಅಂತ ಯಾರು ಹೇಳತಾ ಇಲ್ಲ. ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುವ ಅನುಭವ ಆದಾನಿಗೆ ಇಲ್ಲ. ಆದರೂ ಕೂಡ ನಿಯಮಗಳಿಗೆ ತಿದ್ದುಪಡಿ ತಂದು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿದ್ದಾರೆ.

2004ರಲ್ಲಿ ಪ್ರಪಂಚದ 600ನೇ ಸ್ಥಾನದಲ್ಲಿ ಬಂಡವಾಳಶಾಹಿ ವರ್ಗ ದ ಸ್ಥಾನದಲ್ಲಿ ಆದಾನಿ ಇದ್ದ. ಇಂದು 2 ನೇ ಸ್ಥಾನದಲ್ಲಿ ಬರಬೇಕಾದರೆ ಏನೇನು ಮಾಡಿದ್ದಾರೆ ಅಂತಾ ಹೇಳಬೇಕು. ಇದಕ್ಕೆ ಮೋದಿ ಉತ್ತರ ಕೊಡತಾ ಇಲ್ಲ. ಶ್ರೀಲಂಕಾದ ಅಧ್ಯಕ್ಷ ರಾಜಪಕ್ಷಿ ಮೇಲೆ ಒತ್ತಡ ತಂದು ವಿಂಡ್ ಮಿಲ್ ಗುತ್ತಿಗೆ ಕೊಡಲಾಗಿದೆ. ವಿಂಡ್ ಮಿಲ್‌ನಿಂದ ಆಕ್ಸಿಜನ್ ಹೆಚ್ಚು ಉತ್ಪಾದನೆ ಬರುತ್ತದೆ ಎಂದು ಮಹಾ ವಿಜ್ಞಾನಿ ನರೇಂದ್ರ ಮೋದಿ ಹೇಳಿದ್ದು ಜನರಿಗೆ ಗೊತ್ತಿದೆ. ಆದಾನಿಗೆ ಅನುಕೂಲವಾಗುಯವಂತೆ ನೋಡಿಕೊಂಡಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು