ನವಲಗುಂದ: ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹಾಗೂ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರ ಸರಕಾರ ಓಬಿಸಿ ಮೀಸಲಾತಿ ಪಟ್ಟಿ ಸೇರ್ಪಡೆಗೆ ಒತ್ತಾಯಿಸಿ ರಾಜ್ಯಾದ್ಯಂತ ಕೈಗೊಂಡಿರುವ ಪ್ರಯುಕ್ತ ಧಾರವಾಡ ಜಿಲ್ಲಾ ಮಟ್ಟದ ಹೋರಾಟದ ಅಂಗವಾಗಿ ಹುಬ್ಬಳ್ಳಿಯಲ್ಲಿ ಅ. 13ರಂದು ಇಷ್ಟಲಿಂಗ ಪೂಜೆ ನೆರವೇರಿಸಲಿದ್ದಾರೆ.
ಅದರ ಪೂರ್ವ ಭಾವಿಯಾಗಿ ನವಲಗುಂದ ತಾಲೂಕಿನ ಸಮಾಜ ಭಾಂದವರ ಸಭೆಯನ್ನು ಪಟ್ಟಣದ ಪಿಎಲ್ಡಿ ಬ್ಯಾಂಕಿನ ಶ್ರೀ ಶಂಕರಗೌಡ ಪಾಟೀಲ ಸಭಾ ಭವನದಲ್ಲಿ ಅ. 11 ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ.
ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಆಗಮಿಸಿ ಹೋರಾಟದ ಬಗ್ಗೆ ತಿಳಿಸಲಿದ್ದಾರೆ. ಬಾಪುಗೌಡ ಪಾಟೀಲ, ವಿಜಯ ಕುಲಕರ್ಣಿ ಮತ್ತು ನಿಂಗಣ್ಣ ಕರಿಕಟ್ಟಿ ಆಗಮಿಸುವರು. ಕಾರಣ ನವಲಗುಂದ ತಾಲೂಕಾ ಘಟಕದ ಪದಾಧಿಕಾರಿಗಳು ಹಾಗೂ ನಗರ ಘಟಕದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆ ನೀಡಬೇಕೆಂದು ಕೋರಲಾಗಿದೆ.