ಹುಬ್ಬಳ್ಳಿ: ಬೈಂದೂರಿನ ಬಿಜೆಪಿ ಮುಖಂಡ, ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು 7 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರ ಕುಂದಾಪುರ ಪರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಭರ್ಜರಿ ಬ್ಯಾಟ್ ಬೀಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ನಿರ್ದೋಷಿಯಾಗಿ ಬರ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಡೋ ಕೆಲಸ ಆಗ್ತಿದೆ. ಚಕ್ರವರ್ತಿ ಸೂಲಿಬೆಲೆ ಇರಬಹುದು, ಪುನೀತ್ ಕೆರೆಹಳ್ಳಿ ಇರಬಹುದು, ಪ್ರಮೋದ್ ಮುತಾಲಿಕ್ ಇರಬಹುದು. ಯಾವದಾದರೂ ನೆಪ ಮಾಡಿ ಜೈಲಿಗೆ ಹಾಕೋ ಕೆಲಸ ಆಗ್ತಿದೆ. ಇದೀಗ ಅದೇ ಮಾದರಿಯಲ್ಲಿ ಚೈತ್ರಾ ಕುಂದಾಪುರ ಅಂದರ್ ಆಗಿದ್ದಾರೆ. ಅವರನ್ನು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಸಿಗಿಸಿ ಹಾಕೋ ಕೆಲಸ ಆಗ್ತಿದೆ. ಅದರೂ ಸಂಪೂರ್ಣ ತನಿಖೆಯಾಗಬೇಕು. ತನಿಖೆಯ ಮೂಲಕ ಯಾರೂ ತಪ್ಪಿತಸ್ಥರು ಅಂತಾ ಗೊತ್ತಾಗಲಿದೆ. ಚೈತ್ರಾ ಅವರು ಹೊರಗೆ ಬರಬೇಕೆಂದು ಮುತಾಲಿಕ್ ಆಗ್ರಹ ಮಾಡಿದರು.