ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಸಮಾಜದ ವತಿಯಿಂದ ನವಲಗುಂದ ಮತಕ್ಷೇತ್ರದ ನೂತನ ಶಾಸಕರಾದ ಎನ್.ಹೆಚ್ ಕೋನರಡ್ಡಿ ಅವರಿಗೆ ಬೆಳ್ಳಿ ಕೀರಿಟ ನೀಡುವುದರ ಮೂಲಕ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಗುರುಗಳಾದ ಸೈಯ್ಯದ ಅಮಾನುಲ್ಲಾ ಖಾಜಿ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ ಅಸೂಟಿ, ಪದ್ಮಶ್ರೀ ರಾಷ್ಟ್ರ ಪ್ರಶಸ್ತಿ ವಿಜೇತರಾದ ಅಬ್ದುಲ್ ಖಾದರ್, ನಡಕಟ್ಟಿನ ಸಿರಾಜ ಅಹಮ್ಮಯ, ಕುಡ್ಡಿವಾಲೆ ನವಲಗುಂದ ಪುರಸಭೆ ಅಧ್ಯಕ್ಷರಾದ ಮೋದಿನಸಾಬ ಶಿರೂರ, ಅಣ್ಣಿಗೇರಿ ಪುರಸಭೆ ಅಧ್ಯಕ್ಷರಾದ ರಜೀಯಾಬೇಗಂ ರೊಕ್ಕದಕೊಟ್ಟಿ, ಬಾಬಾಜಾನ ಮುಲ್ಲಾ, ಉಸ್ಮಾನ ಬಬರ್ಚಿ, ಶೈಪುದ್ದಿನ ಅವರಾಧಿ, ಹಟೇಲ ರಾಮದುರ್ಗ, ದಾವಲಸಾಬ ಮಸೂತಿ ರಿಯಾಜಾಅಹ್ಮದ ಪೀರಜಾದೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.