News Karnataka Kannada
Tuesday, May 07 2024
ಹುಬ್ಬಳ್ಳಿ-ಧಾರವಾಡ

ಮತದಾನಕ್ಕಾಗಿ ಶಾಲಾ ಮಕ್ಕಳಿಂದ ಪತ್ರ ಚಳವಳಿ

ಮತದಾನ ಪ್ರಮಾಣ ಹೆಚ್ಚಿಸುವುದರೊಂದಿಗೆ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸ್ವೀಪ್ ಸಮಿತಿ ಹಲವು ಬಗೆಯ ಚಟುವಟಿಕೆ ಹಮ್ಮಿಕೊಂಡಿದ್ದು, ಸಮೀಪದ ಶಲವಡಿ ಗ್ರಾಮದ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ತಮ್ಮ ಪೋಷಕರಿಗೆ ಪತ್ರ ಬರೆಸುವ ಚಳವಳಿ ಗಮನ ಸೆಳೆದಿದೆ.
Photo Credit : NewsKarnataka

ಧಾರವಾಡ: ಮತದಾನ ಪ್ರಮಾಣ ಹೆಚ್ಚಿಸುವುದರೊಂದಿಗೆ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸ್ವೀಪ್ ಸಮಿತಿ ಹಲವು ಬಗೆಯ ಚಟುವಟಿಕೆ ಹಮ್ಮಿಕೊಂಡಿದ್ದು, ಸಮೀಪದ ಶಲವಡಿ ಗ್ರಾಮದ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ತಮ್ಮ ಪೋಷಕರಿಗೆ ಪತ್ರ ಬರೆಸುವ ಚಳವಳಿ ಗಮನ ಸೆಳೆದಿದೆ.

ಯಾವುದೇ ಹಣ, ಹೆಂಡ ಆಮಿಷಗಳಿಗೆ ಒಳಗಾಗದೆ ತಮಗೆ ಇಷ್ಟ ಬಂದ ವ್ಯಕ್ತಿ, ಪಕ್ಷಕ್ಕೆ ಮತನೀಡಿ. ನೀವು ನೀಡುವ ಮತ ಉತ್ತಮ ವ್ಯಕ್ತಿತ್ವ, ದೇಶದ ಹಿತ ಬಯಸುವ ಅಭ್ಯರ್ಥಿಗೆ ಮತ ನೀಡುವುದರಿಂದ ದೇಶದ ಅಭಿವೃದ್ಧಿ ಆಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಅಂಚೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಶಾಲೆಯ ಮುಖ್ಯಶಿಕ್ಷಕಿ ಎನ್. ವಿ.ಕುರವತ್ತಿಮಠ, ಶಿಕ್ಷಕರಾದ ವಿ.ಜಿ. ಬೆನಕಟ್ಟಿ, ಜಿ.ಕೆ.ನರೇಗಲ್, ಗಿರೀಶ ಹಾಗೂ ಶಿಕ್ಷಕಿಯರಾದ ಎಂ.ಎಂ.ಕಲ್ಯಾಣಿ, ಭಾರತಿ ಸೋಮನ್ನವರ, ವಿ.ಕೆ. ದೇಸಾಯಿ, ಎಸ್.ಎಸ್.ಲಾಂಡೆ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು