ಧಾರವಾಡ: ಮತದಾನ ಪ್ರಮಾಣ ಹೆಚ್ಚಿಸುವುದರೊಂದಿಗೆ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸ್ವೀಪ್ ಸಮಿತಿ ಹಲವು ಬಗೆಯ ಚಟುವಟಿಕೆ ಹಮ್ಮಿಕೊಂಡಿದ್ದು, ಸಮೀಪದ ಶಲವಡಿ ಗ್ರಾಮದ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ತಮ್ಮ ಪೋಷಕರಿಗೆ ಪತ್ರ ಬರೆಸುವ ಚಳವಳಿ ಗಮನ ಸೆಳೆದಿದೆ.
ಯಾವುದೇ ಹಣ, ಹೆಂಡ ಆಮಿಷಗಳಿಗೆ ಒಳಗಾಗದೆ ತಮಗೆ ಇಷ್ಟ ಬಂದ ವ್ಯಕ್ತಿ, ಪಕ್ಷಕ್ಕೆ ಮತನೀಡಿ. ನೀವು ನೀಡುವ ಮತ ಉತ್ತಮ ವ್ಯಕ್ತಿತ್ವ, ದೇಶದ ಹಿತ ಬಯಸುವ ಅಭ್ಯರ್ಥಿಗೆ ಮತ ನೀಡುವುದರಿಂದ ದೇಶದ ಅಭಿವೃದ್ಧಿ ಆಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಅಂಚೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಶಾಲೆಯ ಮುಖ್ಯಶಿಕ್ಷಕಿ ಎನ್. ವಿ.ಕುರವತ್ತಿಮಠ, ಶಿಕ್ಷಕರಾದ ವಿ.ಜಿ. ಬೆನಕಟ್ಟಿ, ಜಿ.ಕೆ.ನರೇಗಲ್, ಗಿರೀಶ ಹಾಗೂ ಶಿಕ್ಷಕಿಯರಾದ ಎಂ.ಎಂ.ಕಲ್ಯಾಣಿ, ಭಾರತಿ ಸೋಮನ್ನವರ, ವಿ.ಕೆ. ದೇಸಾಯಿ, ಎಸ್.ಎಸ್.ಲಾಂಡೆ ಇತರರು ಇದ್ದರು.