ಕುಂದಗೋಳ: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ರೆ ಭಯದ ಬದಲಾಗಿ ಅದರಿಂದ ಹೇಗೆ ಪಾರಾಗಬೇಕು ? ಅಗ್ನಿಶಮನ ಹೇಗೆ ಮಾಡಬೇಕು ? ಎಂಬುದರ ಅರಿವು ಅಗ್ನಿಶಾಮಕ ದಳದ ಅಧಿಕಾರಿಗಳು ಅಣುಕು ಪ್ರದರ್ಶನದ ಮೂಲಕ ಹಿರೆನೇರ್ತಿ ಗ್ರಾಮದಲ್ಲಿ ತಿಳಿಸಿದರು.
ಹೌದು, ಪ್ರಭಾರ ಪ್ರಮುಖ ಅಗ್ನಿಶಾಮಕ ಅಧಿಕಾರಿ ವಿ.ವಾಯ್. ದೊಡ್ಡವಾಡ ನೇತೃತ್ವದಲ್ಲಿ ಪಿಡಿಓ ಶೈಲಾ ನೀಲಗಾರ ಉಪಸ್ಥಿತಿಯಲ್ಲಿ ಗ್ರಾಮದ ಜನರಿಗೆ ಅಗ್ನಿಶಾಮಕ ದಳದ ವತಿಯಿಂದ ಪ್ರಾಯೋಗಿಕ ತಿಳುವಳಿಕೆ ನೀಡಲಾಯಿತು.
ಅಗ್ನಿಶಾಮಕ ದಳದ ಅಗ್ನಿ ಅನಾಹುತದಂತಹ ಸಮಯದಲ್ಲಿ ಯಾವ ತೆರನಾಗಿ ಕೆಲಸ ನಿರ್ವಹಣೆ ಮಾಡುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸರ್ವ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.