ಹುಬ್ಬಳ್ಳಿ: ಮಾರುಕಟ್ಟೆಗೆ ತರಕಾರಿ ತರಲೆಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿಯೋರ್ವ, ಮರಳಿ ಮನಗೆ ಬಾರದೇ ಕಾಣೆಯಾಗಿರುವ ಘಟನೆ ಹಳೇ ಹುಬ್ಬಳ್ಳಿಯ ಅಕ್ಕಸಾಲಿಗರ ಓಣಿಯ ಸದರಸೋಪಾದಲ್ಲಿ ನಡೆದಿದೆ.
ವಿಠಲ ಚಾಂದಗೋಡ್ಕ (54) ಎಂಬಾತನೇ ಕಾಣೆಯಾದ ವ್ಯಕ್ತಿಯಾಗಿದ್ದಾನೆ. ಈತ ಡಿಸೆಂಬರ್ 11 ರಂದು ಮಾರುಕಟ್ಟೆಗೆ ತರಕಾರಿ ತರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ಆ ಬಳಿಕ ಈವರೆಗೂ ಮನೆಗೆ ಬಂದಿಲ್ಲ. ಇನ್ನು, ವಿಠಲ ಅತಿಯಾಗಿ ಸರಾಯಿ ದಾಸನಾಗಿದ್ದ, ಸಾರಾಯಿ ಕುಡಿಯುವುದನ್ನು ಬಿಡುವಂತೆ ಕುಟುಂಬಸ್ಥರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಣೆಯಾದ ವಿಠಲ ಚಾಂದಗೋಡ್ಕ ಕುಟುಂಬಸ್ಥರು ತಮ್ಮ ನೆರೆಹೊರೆಯವರಲ್ಲಿ ವಿಚಾರಿಸಿದರೂ ಕೂಡಾ ಸುಳಿವು ಸಿಗದ ಹಿನ್ನಲೆಯಲ್ಲಿ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.