ಕುಂದಗೋಳ : ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಬ್ಬಿನ ಹೊಲವೊಂದು ಸುಟ್ಟು ಭಸ್ಮವಾದ ಘಟನೆ ಕುಂದಗೋಳ ತಾಲೂಕಿನ ಗೌಡಗೇರಿ ಗ್ರಾಮದಲ್ಲಿ ಕಳೆದ ಶನಿವಾರ ಜರುಗಿದೆ.
ಗೌಡಗೇರಿ ಗ್ರಾಮದ ಹಣುಮಂತ ನಿಂಗಪ್ಪ ಕಂಬಳಿ ಹಾಗೂ ಶರಣಪ್ಪ ಬಟ್ಟೂರು ಎಂಬುವವರ ಜಮೀನಿನಲ್ಲಿನ 2 ಎಕರೆ 20 ಗುಂಟೆ ಕಬ್ಬಿನ ಬೆಳೆಗೆ ಬೆಂಕಿ ತಗುಲಿದ್ದು, ಬೆಂಕಿ ರಭಸಕ್ಕೆ ಸಂಪೂರ್ಣ ಕಬ್ಬಿನ ಬೆಳೆ ನಾಶವಾಗಿದೆ.ಕಬ್ಬಿನ ಬೆಳೆಗೆ ಬೆಂಕಿ ತಗುಲಿದ ವಿಷಯವನ್ನು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ತಿಳಿಸಿದರೂ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಕೈಗೊಳ್ಳುವ ವೇಳೆಗೆ ಬೆಂಕಿ ಕೆನ್ನಾಲಿಗೆಗೆ ಕಬ್ಬು ಆಹುತಿಯಾಗಿದೆ.
ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕಬ್ಬಿನ ಬೆಳೆಗೆ ಬೆಂಕಿ ಹೇಗೆ ತಗುಲಿದೆ ಎಂಬುದು ಪೊಲೀಸ್ ತನಿಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಪರಿಶೀಲನೆ ಬಳಿಕ ತಿಳಿದು ಬರಬೇಕಿದೆ.