News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಕುಂದಗೋಳ: ವರುಣ ಬಾರದ ಹಿನ್ನಲೆ, ದೇವರ ಮೊರೆ ಹೋದ ಗ್ರಾಮಸ್ಥರು

Villagers turn to God as varuna did not come
Photo Credit : News Kannada

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಬಾಯಿ ಬಿಟ್ಟ ಭೂಮಿ ಕಂಗಾಲಾದ ಅನ್ನದಾತ ಮಳೆರಾಯನ ಮುನಿಸುವಂತೆ ಗ್ರಾಮದ ರೈತರು ಕಂಗಾಲಾಗುವಂತಾಗಿದೆ ಈಗಾಗಲೇ ಅಶ್ವಿನಿ ಬರಣಿ ಪ್ರತೀಕ ರೋಹಿಣಿ ಮಗಶಿರ ಮಳೆಗಳು ಮುಖವನ್ನು ತೋರಿಸಿಲ್ಲ ಹೀಗಾಗಿ ರೈತಾಪಿ ವರ್ಗ ಮುಗಿಲಿನ ಕಡೆ ಮುಖ ಮಾಡಿ ಕುಳಿತಿದ್ದು, ಇದೀಗ ಗ್ರಾಮಸ್ಥರು ಗ್ರಾಮದ ದೇವರುಗಳ ಮರೆಹೋಗಿದ್ದಾರೆ.

ಆದರೆ ಯಾವುದೇ ಪ್ರಯೋಜನವಾಗಿಲ್ಲ ಬಿದ್ದ ಅಲ್ಪುಸಲ್ಪು ಮಳೆಗೆ ಭೂಮಿ ಹಸಿಯಾಗಿಲ್ಲ ಇದರಿಂದ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ . ರೈತನ ಚಿಂತೆಯನ್ನು ನೋಡಿ ಮಾಗಶಿರ ಮಳೆಯಾದರೂ ಆಗಬಹುದು ಎಂದು ಗ್ರಾಮದ ಮಹಿಳೆಯರು ಮುತ್ತೈದಿಯರು ಗ್ರಾಮದ ದೇವರ ಮೊರೆ ಹೋಗಿದ್ದಾರೆ. ಈ ಮಳೆಯಾಗಿದ್ದರೆ ಶೇಂಗಾ ಹೆಸರು ಸುಯಬಿನ್ನ ಭೇಟಿ ಹತ್ತಿ ಮೆಣಸಿನ ಸಸಿ ಅಲಸಂದೆ ಉದ್ದು ಬಿತ್ತುವ ಕೆಲಸ ನಡೆಯುತ್ತಿತ್ತು.

ಆದರೆ ಈ ಮಳೆಯು ನಿರೀಕ್ಷೆಯಲ್ಲಿದ್ದ ರೈತರಿಗೀಗ ತೆಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ .ಹೊಲಗಳೆಲ್ಲ ಅರಗಿ ಬಿತ್ತನೆಗೆ ಸಿದ್ಧಗೊಳಿಸಿದ್ದೇವೆ ಸಾಲ ಸೋಲ ಮಾಡಿ ಬೀಜ ಗೊಬ್ಬರಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ ಮಳೆರಾಯನಿಗಾಗಿ ಕಾಯುತ್ತಿದ್ದೇವೆ ಆದರೆ ಮಳೆರಾಯ ಮಾತ್ರ ಕರುಣೆ ತೋರಿಸುತ್ತಿಲ್ಲ.

ಇದೇ ಸ್ಥಿತಿ ಮುಂದುವರೆದರೆ ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬುದು ರೈತನಿಗೆ ಚಿಂತೆಯಾಗಿದೆ ಎನ್ನುತ್ತಾರೆ ಗ್ರಾಮದ ರೈತ ಭರತೇಶ್ ಯೋಗಪ್ಪನವರು ಅಳಲು ತೋಡಿಕೊಳ್ಳುತ್ತಾರೆ ಒಟ್ಟಿನಲ್ಲಿ ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕಾಗಿದೆ ಅಲ್ಲದೆ ಬೆಳೆ ವಿಮೆ ಕೂಡಲೇ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ತೀರುವ ಅಧಿಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಬಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು