News Karnataka Kannada
Wednesday, May 01 2024
ಹುಬ್ಬಳ್ಳಿ-ಧಾರವಾಡ

ಕಲಘಟಗಿ: ಹಳ್ಳಿ ಹಳ್ಳಿಗಳಿಗೆ ತೆರಳಿ ಸಂತೋಷ ಲಾಡ್ ಅಬ್ಬರದ ಪ್ರಚಾರ

Kalaghatgi: Happy Lad goes to villages
Photo Credit : News Kannada

 

ಕಲಘಟಗಿ: ಕಲಘಟಗಿ-ಅಳ್ನಾವರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್, ಅಖಾಡಕ್ಕೆ ಇಳಿದಿದ್ದು ಈಗಾಗಲೇ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಚಾರ ಸಭೆ ಮಾಡಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಪರ ಈಗ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬೆನ್ನಿಗೆ ನಿಂತು, ಪ್ರಚಾರಕ್ಕೆ ಸಾತ್ ನೀಡಿದ್ದಾರೆ. ಇಂದು ಕಲಘಟಗಿಯಿಂದ ದೇವಿಕೊಪ್ಪದ ವರೆಗೆ ಬೈಕ್ ರ‌್ಯಾಲಿ ಆರಂಭವಾಗಿದ್ದು, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮತ್ತು ಸಂತೋಷ ಲಾಡ್ ಅವರು ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದು, ಕಲಘಟಗಿ ಕ್ಷೇತ್ರದ ದೇವಿಕೊಪ್ಪದಲ್ಲಿ ಪ್ರಚಾರ ಸಭೆಯನ್ನು ಹಮ್ಮಿಕೊಂಡಿದ್ದು, ಸಾವಿರಾರು ಜನರು ಕೂಡಿದ್ದರು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಅವರು ಭಾಗವಹಿಸಿ, ಕಲಘಟಗಿ ಕ್ಷೇತ್ರ ಹೆಚ್ವು ಅಭಿವೃದ್ಧಿಯಾಗಬೇಕೆಂದ್ರೆ ಈ ಬಾರಿ ಸಂತೋಷ ಲಾಡ್ ಅವರಿಗೆ ಮತ ಹಾಕಿ ಆರಿಸಿ ತನ್ನಿ. ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತಾರೆಂದು ಹೇಳಿದರು.

ಇನ್ನು ದೇವಿಕೊಪ್ಪದಲ್ಲಿ ಪ್ರಚಾರ ಸಭೆಯಲ್ಲಿ ಗ್ರಾಮದ ಸಾವಿರಾರು ಜನರು ಸಂತೋಷ ಲಾಡ್ ಪರ ಜಯ ಘೋಷಣೆ ಹಾಕಿದರು. ಬಿಜೆಪಿ ಹಾಗೆ ಪ್ರಚಾರಕ್ಕೆ ಯಾವ ಹಿರೋ ಹಿರೋಯಿನ್ ಗಳನ್ನು ಕರೆಸುವುದಿಲ್ಲ.‌ ನೀವೆ ನಮ್ಮ ಸ್ಟಾರ್ ಎಂದು ಸಂತೋಷ ಲಾಡ್ ಜನರಿಗೆ ಹೇಳಿದರು. ಕಲಘಟಗಿ ಕ್ಷೇತ್ರ ಉದ್ದಾರ ಮಾಡ್ತೆನಿ ಅಂದ್ರೆ ಮಾತ್ರ ನನಗೆ ವೋಟ್ ಹಾಕಿ, ಇಲ್ಲಾ ಅಂದ್ರ ಬೇಡಾ ಎಂದು ಜನರಲ್ಲಿ ಮನವರಿಕೆ ಮಾಡಿದರು.

ಒಟ್ಟಿನಲ್ಲಿ ಹೇಳಬೇಕೆಂದ್ರೆ ಕಲಘಟಗಿ- ಅಳ್ನಾವರ ವಿಧಾನಸಭಾ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಅವರು, ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ, ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಿಳಿ ಹೇಳಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು