ಹುಬ್ಬಳ್ಳಿ : ಜ್ಯಾತ್ಯಾತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಸೇರಿದ್ದಾರೆ. ದೇವೆಗೌಡರು ಯಾವ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ ಅಂತಿದ್ರು ಇದೀಗ ಜಿಟಿ ದೇವೆಗೌಡ ಜೊತೆ ಪಕ್ಷದ ಉಳಿವಿಗೆ ಸೇರಿದ್ದೇವೆ ಅಂತಾ ಹೇಳುತ್ತಿದ್ದಾರೆ. ಅಂದರೆ ಇವರಿಗೆ ಯಾವ ಸಿದ್ದಾಂತ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಯಾವ ಸಿದ್ದಾಂತ ಇಲ್ಲ ಏನಿಲ್ಲ. ಅಗಸ್ಟ್ ನಲ್ಲಿ ಸ್ವಲ್ಪ ಮಳೆ ಕೊರತೆಯಾಯ್ತು. ಪಂಪಸೆಟ್ ಬಳಕೆ ಹೆಚ್ಚಾಯ್ತು, ಹೀಗಾಗಿ ವಿದ್ಯುತ್ ಹೆಚ್ಚು ಬಳಕೆ ಆಯ್ತು. ನಾವು ವಿದ್ಯುತ್ ಖರೀದಿ ಮಾಡಿ ಪೂರೈಕೆ ಮಾಡಬೇಕಾಯ್ತು. ರೈತರಿಗೆ ಸ್ವಲ್ಪ ಸಮಸ್ಯೆ ಆಗಿದೆ ಎಂದರು. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರು ಅಲ್ಲ. ಅವರು ಅಧಿಕೃತ ವಿರೋಧ ಪಕ್ಷದ ನಾಯಕರು. ಅವರನ್ನು ಜಿ.20 ಶೃಂಗಸಭೆಗೆ ಕರೆಯದಿರೋದು ತಪ್ಪು. ನಾನು ಬೇರೆ ಕೆಲಸ ಇರೋ ಕಾರಣಕ್ಕೆ ಔತಣಕೂಟಕ್ಕೆ ಹೋಗತಿಲ್ಲ ಎಂದರು.
ಜೋಶಿ 3 ವರ್ಷ ಆಯ್ತು ಇದ್ದು ಮಹದಾಯಿ ಕುರಿತು ಏನು ಮಾಡಿದ್ರು:
ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ನಮಗೆ ಫಾರೆಸ್ಟ್ ಕ್ಲೀಯರೆನ್ಸ್ ಕೊಟ್ಟಿಲ್ಲ. ನಾವು ಯೋಜನೆ ಮಾಡಲು ರೆಡಿ ಇದ್ದೇವೆ. ಜೋಶಿ ಅವರು ಮೂರು ವರ್ಷಗಳಿಂದ ಏನು ಮಾಡುತ್ತಿದ್ದಾರೆ. ನಾವು ಪ್ರಧಾನಿಗಳೊಂದಿಗೆ ಸಭೆ ನಡೆಸಲು ಸಮಯ ಕೇಳಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹದಾಯಿ ವಿಚಾರಕ್ಕೆ ಎಲ್ಲ ಪಕ್ಷಗಳ ಸಭೆ ಸಬಂಧಿಸಿ ಸಮಯ ಕೊಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. 10 ದಿನದ ಹಿಂದೆ ಪತ್ರ ಬರೆದಿದ್ದೇನೆ ಆದರೆ ಉತ್ತರ ಕೊಡಲಿಲ್ಲ. ಬರಗಾಲ ಘೋಷಣೆ ಸಂಬಂಧಿಸಿ ನಿಯಮ ಬದಲಾವಣೆಗೆ ಪತ್ರ ಬರೆದಿದ್ದೇನೆ. ಅದಕ್ಕೆ ಉತ್ತರ ಕೊಟ್ಟಿಲ್ಲ. ಬರಗಾಲ ನಾವು ಘೋಷಣೆ ಮಾಡಿಯೇ ಮಾಡುತ್ತೇವೆ. ಆದರೆ ಕೇಂದ್ರ ಸರ್ಕಾರದ ನೆರವು ಬೇಕು. ಈ ಕುರಿತು ನಿಯಮ ಬದಲಾವಣೆ ಮಾಡಿ ಅಂತಾ ಬರೆದಿದ್ದೇನೆ. ಅದನ್ನು ಇದುವರೆಗೂ ಮಾಡಿಲ್ಲ ಎಂದರು.
ಆಮ್ ಆದ್ಮಿ ಪಕ್ಷಕ್ಕೆ ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್ಸಿಆರ್ಎ ತನಿಖೆಯನ್ನು ಕೋರಿ…
ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…
ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ…
ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…
ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…
ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…