News Karnataka Kannada
Saturday, May 11 2024
ಹುಬ್ಬಳ್ಳಿ-ಧಾರವಾಡ

ಅಂತರ್ ಧರ್ಮೀಯ ವಿವಾಹ: ಪೊಲೀಸ್ ಠಾಣೆಯ ಎದುರು ಪ್ರತಿಭಟನೆ

ಅಂತರ್ ಧರ್ಮೀಯ ವಿವಾಹವಾಗಿದ್ದ ಇಬ್ಬರು ಪ್ರೇಮಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬೇರ್ಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಕಾರ್ಯಕರ್ತರು ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Photo Credit : News Kannada

ಧಾರವಾಡ: ಅಂತರ್ ಧರ್ಮೀಯ ವಿವಾಹವಾಗಿದ್ದ ಇಬ್ಬರು ಪ್ರೇಮಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬೇರ್ಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಕಾರ್ಯಕರ್ತರು ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮತ್ತು ಅದೇ ಗ್ರಾಮದ ಅನ್ಯ ಧರ್ಮೀಯ ಯುವತಿ (ಹೆಸರು ಬದಲಾವಣೆ ಮಾಡಲಾಗಿದೆ ಉಮಾ) ಪರಸ್ಪರ ಪ್ರೀತಿಸಿದ್ದರು. ಮದುವೆ ಸಹ ಆಗಿ. ಪರಸ್ಪರ ಒಪ್ಪಿ ಇತ್ತೀಚೆಗೆ ರಿಜಿಸ್ಟರ್ ಮ್ಯಾರೇಜ್‌ ಸಹ ಆಗಿದ್ದಾರೆ. ಆದರೆ ಮದುವೆಯಾದ ಬಳಿಕ ಹುಡುಗಿ ತಾಯಿ ಮನೆಯವರು ಹುಡುಗನ ವಿರುದ್ಧ ಕಿಡ್ನಾಪ್ ಕೇಸ್‌ ದಾಖಲಿಸಿದ್ದಾರೆ.

ತಾನು ಇಷ್ಟವಿದ್ದೇ ಮದುವೆಯಾಗಿದ್ದಾಗಿ ಹುಡುಗಿ ಹೇಳಿದಾಗಲೂ ಪೊಲೀಸರು ಯಾರದೋ ಮಾತು ಕೇಳಿ ಈಗ ಹುಡುಗಿಯನ್ನು ಸಾಂತ್ವನ ಕೇಂದ್ರಕ್ಕೆ ಹಾಕಿ ಹುಡುಗನನ್ನು ವಶಕ್ಕೆ ಪಡೆದುಕೊಂಡು ಹಲ್ಲೆ ನಡೆಸಿದ್ದಾರೆ. ಈಗಲೂ ಸಹ ಹುಡುಗಿ ನನ್ನ ಜೊತೆ ಬರಲು ಒಪ್ಪಿಗೆ ಇದ್ದರೂ ಪೊಲೀಸರು ಬೇರ್ಪಡಿಸುತ್ತಿದ್ದಾರೆ ಅಂತಾ ಪ್ರೀತಿಸಿ ಮದುವೆಯಾದ ಯುವಕ ಮಂಜುನಾಥ ಆರೋಪ ಮಾಡಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಹೋರಾಟ ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಹುಡುಗಿಯನ್ನು ಹುಡುಗನ ಜೊತೆ ಕಳುಹಿಸಿ ಎಂದು ಒತ್ತಾಯಿಸಿದ್ದಾರೆ. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸರು ಹುಡುಗ ಹುಡುಗಿ ಬೇರ್ಪಡಿಸಿ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಈ ವಿಷಯ ಎಲ್ಲಿಗೆ ಬಂದು ತಲುಪುತ್ತೋ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು