ಹುಬ್ಬಳ್ಳಿ: ಈ ಬಾರಿ ಭಾರತೀಯ ಸಂಸ್ಕೃತಿಗೆ ಒತ್ತು ಕೊಡೋ ಶಾಸಕರು ಆಯ್ಕೆ ಆಗಿ ಬರ್ತಾರೆ. ಬಿಜೆಪಿಯಿಂದ ಅಂತಹ ಶಾಸಕರು ಗೆದ್ದು ಬರ್ತಾರೆ . ಈ ಭಾರಿ ಯುವಕರಿಗೆ ಹೆಚ್ಚು ಸ್ಥಾನವನ್ನು ಕೊಡಲಾಗಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶಗೋಸ್ಕರ ಈ ಸಂಸ್ಕೃತಿ, ಧರ್ಮ ವನ್ನು ಉಳಿಸಬೇಕು. ಅಂತಹ ಸ್ವತಂತ್ರ್ಯ ಪೂರ್ವದ ಸ್ವತಂತ್ರ್ಯ ಗೋಸ್ಕರ ಹೋರಾಟ ಮಾಡಿ ಮತ್ತು ಬಲಿದಾನ ಮಾಡಿ ಸ್ವರ್ಗದಲ್ಲಿ ಇರುವಂತಹ ಆತ್ಮಕ್ಕೆ ಶಾಂತಿ ಸಿಗುವಂತಹ ಒಂದು ವಿಶೇಷ ಚುನಾವಣೆ ಯಲ್ಲಿ ನಾವು ಇದ್ದೇವೆ ಎಂದರು.
ಈ ಬಾರಿ ಬಿಜೆಪಿ ಯುವಕರಿಗೆ ಟಿಕೆಟ್ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಗಾರ ಕನಸು ನನಸಾಗಲು, ಯುವಕರು ಈ ಬಾರಿ ಗೆಲ್ತಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಅಭ್ಯರ್ಥಿಯಾಗಿರೋದು ಸಂತೋಷ. ಅವರು ಗೆದ್ದು ಬರೋ ವಿಶ್ವಾಸ ಇದೆ. ಅವರಿಗೆ ಶುಭಕೋರಲು ನಾನು ಶಿವಮೊಗ್ಗದಿಂದ ಬಂದಿದ್ದೇನೆ. ಇಡೀ ಕರ್ನಾಟಕದಲ್ಲಿ ಟೆಂಗಿನಕಾಯಿ ಆಯ್ಕೆ ಬಹಳ ಪ್ರಾಮುಖ್ಯ. ಶೆಟ್ಟರ್ ಪಕ್ಷ ಬಿಟ್ಟು ಹೋಗಿರೋದು ದುರದೃಷ್ಟಕರ. ಪಾರ್ಟಿ ಬಿಟ್ಟಿರೋದಕ್ಕೆ ಕಾರ್ಯಕರ್ತರ ಆಕ್ರೋಶವೂ ಇದೆ. ಹೀಗಾಗಿ ಟೆಂಗಿನಕಾಯಿ ಗೆಲ್ತಾರೆ ಎಂದರು.
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…
ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…
ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…