ಹುಬ್ಬಳ್ಳಿ: ಬ್ರಾಹ್ಮಣರು ಕೂಡಾ ಸಿಎಂ ಆಗಬಹುದು, ಆಗಬಾರದು ಅಂದರೆ ಹೇಗೆ. ಕುಮಾರಸ್ವಾಮಿ ಅವರಿಂದ ಜಾತಿಗಳ ನಡುವೆ ವಿಷಬೀಜ ಬಿತ್ಕೆತುವ ಕೆಲಸ ಆಗುತ್ತಿದೆ. ಸಿಎಂ ಹುದ್ದೆಯನ್ನು ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತಗೆದುಕೊಂಡೀದಾರಾ ? ಎಂದು ಸಚಿವ ಶ್ರೀರಾಮುಲು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಇವರೇ ಮುಖ್ಯಮಂತ್ರಿ ಆಗಬೇಕು ಅನ್ನೋದು ಇಲ್ಲ. ಸಂವಿಧಾನದಲ್ಲಿ ಯಾವ ಜಾತಿಯವರು ಕೂಡಾ ಸಿಎಂ ಆಗಬಹುದು. ಪರಿಶಿಷ್ಟ ಪಂಗಡದವರು,ಬ್ರಾಹ್ಮಣರು ಸಿಎಂ ಆಗಬಹುದು . ಕುಮಾರಸ್ವಾಮಿ ಪ್ರಲ್ಹಾದ್ ಜೋಶಿ ಪೇಶ್ವೆ ಸಂಸ್ಕೃತಿ ಎಂದು ಹೇಳ್ತಾರೆ. ಕುಮಾರಸ್ವಾಮಿ ಈ ರೀತಿ ಮಾತಾಡ್ತಾರೆ ಎಂದು ಭಾವಿಸಿರಲಿಲ್ಲ . ಕುಮಾರಸ್ವಾಮಿ ಈ ರೀತಿ ಮಾತಾಡುವುದನ್ನು ಬಿಡಬೇಕಾಗುತ್ತದೆ. ವೈಯಕ್ತಿಕ ಟೀಕೆ ಮಾಡಬಾರದು . ಜೋಶಿ ಇಂದು ಶಕ್ತಿವಂತ ನಾಯಕರು. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡೋದು ಸರಿ ಅಲ್ಲ.ಜೋಶಿ ಅವರನ್ನು ಕೇವಲ ಬ್ರಾಹ್ಮಣರೆಂದು ನಾವು ನೋಡಿಲ್ಲ. ಮೀಸಲಾತಿ ವಿಚಾರದಲ್ಲಿ ಜೋಶಿ ನಮ್ಮ ಜೊತೆ ನಿಂತಿದ್ದಾರೆ. ಯಡಿಯೂರಪ್ಪ ಪರ ಕುಮಾರಸ್ವಾಮಿ ಒಲೈಕೆ ವಿಚಾರ ಮಾತನಾಡಿದ ಅವರು, ಯಡಿಯೂರಪ್ಪ ಪರಿಸ್ಥಿತಿ ದುರಪಯೋಗ ಮಾಡಿಕೊಳ್ಳೊದು ಸರಿ ಅಲ್ಲ. ನಾನು ಬಳ್ಳಾರಿಯಿಂದ ರ್ಧೆ ಮಾಡುತ್ತಿದ್ದೇನೆ.
ರೆಡ್ಡಿ ಮನ ಒಲಿಸುವ ಬಗ್ಗೆ ರಾಮುಲು ಪ್ರತಿಕ್ರಿಯಿಸಿ, ರೆಡ್ಡಿ ಅವರು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಇನ್ನೇನಿದ್ರು ಚುನಾವಣೆ. ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳ್ತೀವಿ ಮುಂದೆ ಏನ್ ಆಗುತ್ತೆದೆ ಎಂದು ಗೊತ್ತಿಲ್ಲ ಎಂದರು.