ಹುಬ್ಬಳ್ಳಿ: ನಗರದ ನಾಗಶೆಟ್ಟಿಕೊಪ್ಪ ಹನುಮಂತ ದೇವಸ್ಥಾನದಿಂದ ಬೃಹತ್ ರೋಡ್ ಶೋ ಮೂಲಕ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರು ಬೃಹತ್ ರೋಡ್ ಶೋ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದರು. ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಹೇಶ್ ಟೆಂಗಿನಕಾಯಿ ಶಕ್ತಿಪ್ರದರ್ಶನ ಮಾಡಿದರು. ಶೆಟ್ಟರ್ ಪ್ರತಿಸ್ಪರ್ಧಿಯಾಗಿ ಇಂದು ಶಕ್ತಿಪ್ರದರ್ಶನ ನಡೆಸಿದರು. ರೋಡ್ ಶೋದಲ್ಲಿ ಬಿಜೆಪಿ ಧ್ವಜಗಳು, ಕೇಸರಿ ಬಾವುಟ ರಾರಾಜಿಸಿದವು. ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರ ಚಿತ್ರದ ಬಾವುಟ ಹಿಡಿದು ಕಾರ್ಯಕರ್ತರು ಜೈಕಾರ ಹಾಕಿದರು.