ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಇರುವ ಹಿನ್ನಲೆಯಲ್ಲಿ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಎಐಎಮ್ಐಎಮ್ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ.
ದುರ್ಗಪ್ಪ ಬಿಜವಾಡ ಅವರು, ಪೂರ್ವ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಅಭಿವೃದ್ಧಿಯ ಬಗ್ಗೆ ತಿಳಿಸುತ್ತ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬರುವ, ವಾರ್ಡ್ ನಂಬರ 81 ರಲ್ಲಿ ಬರುವ ಗಂಗಾಧರನಗರ ಸೆಟಲ್ಮೆಂಟ್, ಅರಳಿಕಟ್ಟಿ ಓಣಿ, ಗಾರ್ಡನ್ ಪೇಟ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪಾದಯಾತ್ರೆ ಮುಖಾಂತರ ಪ್ರಚಾರ ನಡೆಸಿ, ಮತಯಾಚನೆ ಮಾಡಲಾಯಿತು.
ಅಷ್ಟೇ ಅಲ್ದೆ ಅರಳಿಕಟ್ಟಿ ಓಣಿಯಲ್ಲಿ ಯುವಕರ ಜೊತೆ ಸಭೆ ಮಾಡಿ,ಅವರ ಮುಂದಿನ ಭವಿಷ್ಯದ ಬಗ್ಗೆ ತಿಳಿ ಹೇಳಿದ್ದಾರೆ. ಮುಸ್ಲಿಂ ಬಾಂಧವರ ಜೊತೆ ಸಭೆ ಮಾಡಿ ಈ ಬಾರಿ ಪೂರ್ವ ಕ್ಷೇತ್ರದಲ್ಲಿ ಎಐಎಮ್ಐಎಮ್ ಪಕ್ಷಕ್ಕೆ ಮತ ಹಾಕಿ ಎಂದು ಮನವರಿಕೆ ಮಾಡಿದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಸಹೋದರ, ಸಹೋದರಿಯರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.