ಧಾರವಾಡ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕರು ಅನೇಕ ರೀತಿಯಲ್ಲಿ ತಮ್ಮ ಭಕ್ತಿ ಅಭಿವ್ಯಕ್ತಪಡಿಸುತ್ತಿದ್ದಾರೆ. ಧಾರವಾಡದಲ್ಲೊಬ್ಬ ರಾಮ ಭಕ್ತ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುವ ಮೂಲಕ ಭಕ್ತಿ ಮೆರೆದಿದ್ದಾನೆ.
ಹೌದು! ಧಾರವಾಡದ ಜಯನಗರ ಮಿಚಿಗನ್ ಕಂಪೌಂಡ್ ಬಳಿ ಇರುವ ಶಿವಾ ಮೆನ್ಸ್ ಪಾರ್ಲರ್ ಮಾಲೀಕ ಶಿವಾನಂದ ಹಡಪದ ಎನ್ನುವವರು ಇಂದು ಎಲ್ಲರಿಗೂ ಉಚಿತವಾಗಿ ಶೇವಿಂಗ್ ಹಾಗೂ ಕಟಿಂಗ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಉಚಿತವಾಗಿ ಕಟಿಂಗ್ ಮಾಡಲಾಗುತ್ತಿದೆ ಎಂದು ಆ ಪಾರ್ಲರ್ ಜನ, ಜಂಗುಳಿಯಿಂದ ಕೂಡಿತ್ತು. ಒಂದೇ ಅಂಗಡಿಯಲ್ಲಿ ಹತ್ತು ಜನ ಕಟಿಂಗ್, ಶೇವಿಂಗ್ ಮಾಡುವ ಕೆಲಸ ಮಾಡುತ್ತಿದ್ದು, ಕಟಿಂಗ್ ಮಾಡಿಸಿಕೊಳ್ಳಲು ಜನ ಕ್ಯೂ ನಿಂತ ಪ್ರಸಂಗ ಕಂಡು ಬಂತು.