News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ಜೂನ್ 6 ರಂದು ನೀರು ಸರಬರಾಜು ಯೋಜನೆ ಕುರಿತು ಕಾರ್ಯಾಗಾರ

Workshop on water supply scheme to be held on June 6
Photo Credit : News Kannada

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಮಾಲೀಕತ್ವದಲ್ಲಿ ವಿಶ್ವಬ್ಯಾಂಕ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ 24/7 ನಿರಂತರ ನೀರು ಸರಬರಾಜು ಯೋಜನೆಯ ಅನುಷ್ಠಾನವು ಪ್ರಗತಿಯಲ್ಲಿದೆ.

ಯೋಜನೆಯಡಿ ಯೋಜನಾ ಪರಿಣಾಮದ ಮೌಲ್ಯಮಾಪನವನ್ನು ವಿಶ್ವ ಬ್ಯಾಂಕ್ ತಂಡ ನಿಯೋಜಿಸಿದ ತಜ್ಞ ತಂಡವು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪ್ರಾತ್ಯಕ್ಷಿಕ ವಲಯ ಮತ್ತು ಪ್ರಾತ್ಯಕ್ಷಿಕವಲ್ಲದ ವಲಯಗಳಲ್ಲಿ ವಿವಿಧ ಗ್ರಾಹಕರನ್ನು ಭೇಟಿ ಮಾಡಿ ಪ್ರಸ್ತುತ ನೀರು ಸರಬರಾಜು ಯೋಜನೆಯ ಸ್ಥಿತಿಗತಿಗಳು ಹಾಗೂ ಪ್ರಾತ್ಯಕ್ಷಿಕ ವಲಯಗಳಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಜೂನ್ 15, 2023 ರಿಂದ ಅಗಸ್ಟ 30, 2023 ರವರೆಗೆ ಸಮೀಕ್ಷೆ ಕೈಗೊಳ್ಳಲಿದ್ದಾರೆ.

ಮಹಾನಗರ ಪಾಲಿಕೆಯ ಮಹಾಪೌರರು, ಉಪಮಹಾಪೌರರು ಹಾಗೂ ಸದಸ್ಯರುಗಳಿಗೆ ಸದರಿ ಸಮೀಕ್ಷೆಯ ರೂಪುರೇಷೆಗಳ ಕುರಿತು ಮಾಹಿತಿಯನ್ನು ನೀಡಲು ಜೂನ್ 06, 2023 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಮೃತಮಹೋತ್ಸವ ಸಭಾ ಭವನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೂಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲ ಕೃಷ್ಣ ಬಿ., ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು