ಧಾರವಾಡ: ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ರೈತ ಪ್ರಕಾಶ ಯಲ್ಲಪ್ಪ ಗೊಬ್ಬರಗುಂಪಿ ಒಂದು ಕ್ವಿಂಟಾಲ್ ಹದಿನೈದು ಕೆ.ಜಿ ಇರುವ ಗೋಧಿ ತುಂಬಿದ ಚೀಲವನ್ನು ಹೊತ್ತುಕೊಂಡು ಗ್ರಾಮದ ತುಂಬಾ ಸಂಚಾರ ಮಾಡಿ ಶ್ರೀ ಕಲ್ಲೇಶ್ವರ ದೇವಸ್ಥಾನಕ್ಕೆ ತಂದು ಸಾಹಸ ತೋರಿದ್ದಾರೆ.
ಸಾಹಸ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಧಾನ್ಯಗಳ ತುಂಬಿದ ಚೀಲ ಹೊತ್ತು 1500 ರಿಂದ 1600 ಮೀಟರ್ ದೂರದ ವರೆಗೆ ಕ್ರಮಿಸಿದ ಗ್ರಾಮದ ರೈತ ಪ್ರಕಾಶ ಯಲ್ಲಪ್ಪ ಗೊಬ್ಬರಗುಂಪಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಆತನ ಸಾಹಸವನ್ನು ಕೊಂಡಾಡಿದ್ದಾರೆ.