ಹುಬ್ಬಳ್ಳಿ: ಹೈಕಮಾಂಡ್ ಕರೆದಿದ್ದ ಹಿನ್ನೆಲೆಯಲ್ಲಿ ನಾನು ದೆಹಲಿಗೆ ಹೋಗಿದ್ದೆ. ಖುದ್ದು ರಾಹುಲ್ ಗಾಂಧಿ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದರು. ಎಲ್ಲರದೂ ಒಂದೇ ಟಾರ್ಗೆಟ್ ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಎಂಬುದು. ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ . ಲೀಡರ್ ಲೆಸ್ ಪಾರ್ಟಿ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಲೋಕಸಭೆಯಲ್ಲಿ ನಾವು ಹೇಗೆ ಗೆಲ್ಲಬೇಕು ಅನ್ನೋ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಯ್ತು. ರಾಹುಲ್ ಗಾಂಧಿ ರಾಜ್ಯ ರಾಜಕಾರಣದ ಅವಲೋಕನ ಮಾಡಿದರು. ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆದರೆ ಯಾವುದೇ ಟಾಸ್ಕ್ ಕೊಟ್ಟಿಲ್ಲಎಂದರು.
ಬಿಜೆಪಿಗೆ ಮೂರು ತಿಂಗಳಾದ್ರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ. ಬಿಜೆಪಿಯ ದಯನೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ಆಯ್ತು. ನಾನು ಯಾವುದೇ ಕಂಡೀಷನ್ ಹಾಕಿಲ್ಲ. ನನಗೆ ಸೀಟ್ ಬೇಕು ಅಂತ ಯಾವ ಬೇಡಿಕೆಯನ್ನು ಇಟ್ಟಿಲ್ಲ ಎಂದರು.
ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ರು. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಇರಲಿಲ್ಲ. ಹೊಸ ಸರ್ಕಾರ ಬಂದು ಮೂರು ತಿಂಗಳಾಗಿದೆ. ಗುತ್ತಿಗೆದಾರ ಬಿಲ್ ಬಾಕಿ ಇರುವುದು ಕಳೆದ ಸರ್ಕಾರದ್ದು, ಈಗ ಆಪಾದನೆ ಮಾಡುವುದು ದುರುದ್ದೇಶದಿಂದ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಬಿಜೆಪಿ ಸರ್ಕಾರದ ರಾಡಿ ಇದು. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ಬಾಕಿ ಇಲ್ಲ ಎಂದರು.