ಧಾರವಾಡ: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ಮೂರು ದಿನದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್ ಗೆ ಸರ ಸಂಘ ಚಾಲಕ ಮೋಹನ್ ಭಾಗವತ್ ಗುರುವಾರ ಚಾಲನೆ ನೀಡಿದರು.
ಈ ಸಭೆಯಲ್ಲಿ 350ಕ್ಕೂ ಅಧಿಕ ಪ್ರಾಂತದ ಪ್ರತಿನಿಧಿಗಳು, ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ, ಸಹ ಪ್ರಚಾರ ಪ್ರಮುಖರಾದ ನರೇಂದ್ರಕುಮಾರ ಠಾಕೂರ್, ಆಲೋಕಕುಮಾರ್, ಕ್ಷೇತ್ರ ಕಾರ್ಯವಾಹ ತಿಪ್ಪೇಸ್ವಾಮಿ ಭಾಗಿಯಾಗಿದ್ದರು.