ಹುಬ್ಬಳ್ಳಿ, ;ಸೋಷಿಯಲ್ ಮಿಡಿಯಾದಲ್ಲಿ ಉದ್ಯೋಗಾವಕಾಶ ನೀಡುವ ಜಾಹೀರಾತು ಹರಿಬಿಟ್ಟ ಆನ್ಲೈನ್ ವಂಚಕರು ಮಹಿಳೆಯೊಬ್ಬರಿಗೆ ಬರೋಬ್ಬರಿ 14.56 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ವಿನುತಾ ಕಾಲೋನಿ ನಿವಾಸಿ ನಿಖಿತಾ ಗುಂಟಿ ವಂಚನೆಗೊಳಗಾದ ಮಹಿಳೆ.
ಸಾಮಾಜಿಕ ಜಾಲತಾಣದಲ್ಲಿ ವರ್ಕ್ ಫ್ರಂ ಹೋಮ್ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ದಿವ್ಯಾ ಎಂಬ ಹೆಸರಿನ ಯುವತಿ ಜಾಹೀರಾತು ಹಾಕಿದ್ದರು. ಅಲ್ಲದೇ, ಆನ್ಲೈನ್ ಲಿಂಕ್ ಸಹಿತ ಕಳುಹಿಸಿದ್ದಳು. ಬಳಿಕ ಅರ್ಜುನ ಹೆಸರಿನ ವ್ಯಕ್ತಿ ಮಹಿಳೆಯ ಜತೆಗೆ ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂ ಆ್ಯಪ್ನಿಂದ ಚಾಟ್ ಮಾಡಿದ್ದಾನೆ. ಅಲ್ಲದೆ ದಿವ್ಯಾ ನೀಡಿದ ಲಿಂಕ್ ಒತ್ತುವಂತೆ ಹೇಳಿದ್ದಾನೆ.
ನಂತರ ಗೋಲ್ಡï ಪೇ ಆ್ಯಪ್ನಿಂದ ರಿಚಾರ್ಜ್ ಮಾಡಲು ಹೇಳಿ, 100 ರೂ. ರಿಚಾರ್ಜ್ ಮಾಡಿಸಿಕೊಂಡು ಅದೇ ಆ್ಯಪ್ ಮೂಲಕ ಮಹಿಳೆಗೆ 200 ರೂ. ಮರಳಿಸಿದ್ದಾರೆ. ಹೀಗೆಯೇ 3 ಸಾವಿರ ರೂ.ಗೆ 3400 ರೂ., 20 ಸಾವಿರಕ್ಕೆ 24 ಸಾವಿರ ರೂ.ವನ್ನು ಮಹಿಳೆಗೆ ಮರಳಿಸಿ ನಂಬಿಸಿದ್ದನು. ಇದೇ ರೀತಿ ಆ್ಯಪ್ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ನಿಖಿತಾಳ ವಿಶ್ವಾಸ ಗಳಿಸಿದ್ದನು.
ಇದನ್ನು ನಂಬಿದ ನಿಖಿತಾ ಆನ್ಲೈನ್ ಮೂಲಕ ಆರೋಪಿ ಬ್ಯಾಂಕ್ ಖಾತೆಗೆ 1.91 ಲಕ್ಷ ರೂ. ಹಾಗೂ 12.65 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಇವರಿಗೆ ಹಣ ಮಾತ್ರ ಮರಳಿ ಬಂದಿಲ್ಲ. ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ತಡರಾತ್ರಿ ನಡೆದ ಐಪಿಎಲ್ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್…
ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…
ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್ ಹೆಚ್ಚುವರಿಯಾಗಿ ಬಳಕೆಯಾಗಿದೆ.
ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…