News Karnataka Kannada
Wednesday, May 08 2024
ಬೆಳಗಾವಿ

ಕೊಪ್ಪಳ ಜಿಲ್ಲೆ 39 ಕೆರೆಗಳ ತುಂಬಿಸಲು ಯೋಜನೆ -ಸಚಿವ ಜೆ.ಸಿ.ಮಾಧುಸ್ವಾಮಿ

Madhu Swami
Photo Credit : News Kannada

ಬೆಳಗಾವಿ ಸುವರ್ಣ ಸೌಧ ಡಿ.22:-ಕೊಪ್ಪಳ ಜಿಲ್ಲೆಯ 39 ಕೆರೆಗಳನ್ನು ಏತ ನೀರಾವರಿ ಯೋಜನೆ ಮೂಲಕ ತುಂಬಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು,ಶಾನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜಿ.ಸಿ.ಮಾಧುಸ್ವಾಮಿ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ಹೇಮಲತಾ ನಾಯಕ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಭರ್ತಿ ಕಾರ್ಯ ವಿಳಂಬವಾಗಿದ್ದರೆ, ತಾವೇ ಖುದ್ದಾಗಿ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ನೆನೆಗುದಿಗೆ ಬಿದ್ದಿರುವ ಕೆರೆಗಳ ಭರ್ತಿ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಕೊಪ್ಪಳ ಜಿಲ್ಲೆಯ 122 ಕೆರೆಗಳ ಪೈಕಿ 39 ಕೆರೆಗಳು ಏತ ನೀರಾವರಿ ಯೋಜನೆ ಮೂಲಕ ಕೆರೆ ಭರ್ತಿಗೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಏತ ನೀರಾವರಿ ಯೋಜನೆಯಡಿ ಬಳೂಟಗಿ ಹಾಗೂ ತಳಕಲ್ ಕೆರೆಗಳ ಅಭಿವೃದ್ಧಿಯನ್ನು ಅನುಕ್ರಮವಾಗಿ 100 ಲಕ್ಷ ಮತ್ತು 65 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಬಳೂಟಗಿ ಕೆರೆ ಕಾಮಗಾರಿ ಪೂರ್ಣಗೊಂಡಿದೆ. ತಳಕಲ್ ಕೆರೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ.

ಕಳೆದ ಎರಡು ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಣ್ಣ ನೀರಾವರಿ ಇಲಾಕೆಯಿಂದ ಜಿನುಗು ಕೆರೆ, ಚೆಕ್ ಡ್ಯಾಂ,ಆಣೆಕಟ್ಟು,ಪಿಕಪ್,ಬಂದಾರ ಮುಂತಾದುವುಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ 642 ಲಕ್ಷ ರೂಪಾಯಿ ಹಣ ಖರ್ಚುಮಾಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸದಸ್ಯೆ ಹೇಮಲತಾ ನಾಯಕ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಭರ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಕಾರಣ ತ್ವರಿತಗತಿಯಲ್ಲಿ ಕೆರೆ ಭರ್ತಿ ಕಾಮಗಾರಿ ಆರಂಭಿಸಲು ಕೋರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು