News Karnataka Kannada
Thursday, May 02 2024
ಬೆಳಗಾವಿ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನ 5 ಲಕ್ಷ ಲಾಡು ವಿತರಣೆ ಮಾಡಲಿರುವ ಅಭಯ ಪಾಟೀಲ್‌ 

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನದಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್‌  ತಮ್ಮ ಕ್ಷೇತ್ರದ 1 ಲಕ್ಷ ಮನೆಗಳಿಗೆ 5 ಲಕ್ಷ ಮೋತಿಚೂರು ಲಾಡು ವಿತರಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. 
Photo Credit : News Kannada

ಬೆಳಗಾವಿ:  ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನದಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್‌  ತಮ್ಮ ಕ್ಷೇತ್ರದ 1 ಲಕ್ಷ ಮನೆಗಳಿಗೆ 5 ಲಕ್ಷ ಮೋತಿಚೂರು ಲಾಡು ವಿತರಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

ದಕ್ಷಿಣ ಕ್ಷೇತ್ರದಲ್ಲಿ 1 ಲಕ್ಷ ಮನೆಗಳಿಗೆ ಲಾಡು ವಿತರಿಸಲಿದ್ದಾರೆ. 300 ಗ್ರಾಮದ ಪ್ರತಿ ಮನೆಗಳಿಗೆ 5 ಲಾಡುಗಳನ್ನೊಳಗೊಂಡ ಬಾಕ್ಸ್‌ ವಿತರಿಸಲಿದ್ದಾರೆ.

ಸ್ವಾತಂತ್ರ‍್ಯ ಅಮೃತಮಹೋತ್ಸವ ಸಮಯದಲ್ಲಿ ಪ್ರತಿ ಮನೆಗೆ ಜಿಲೇಬಿ ವಿತರಿಸಿದ್ದ ಶಾಸಕ ಅಭಯ್ ಪಾಟೀಲ್‌ ರಾಮಮಂದಿರ ಉದ್ಘಾಟನೆಗೆ ಲಾಡು ವಿತರಿಸಲಿದ್ದಾರೆ.

ಈಗಾಗಲೇ ಲಾಡು ತಯಾರಿಸುವ ಕಾರ್ಯಕ್ಕಾಗಿ ರಾಜಸ್ಥಾನದಿಂದ 50 ಮಂದಿ ನುರಿತರು ಬೆಳಗಾವಿಗೆ ಬಂದಿದ್ದಾರೆ.

ಸ್ಥಳೀಯ 250 ಮಹಿಳೆಯರು ಮೋತಿಚೂರು ಲಾಡು ತಯಾರಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಾಡು ವಿತರಿಸುವ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು