ಚಿಕ್ಕೋಡಿ: ಇದು ಶೇ.40ರಷ್ಟು ಕಮಿಷನ್ ರಾಜ್ಯ ಸರ್ಕಾರ ಎಂದು ಗುತ್ತಿಗೆದಾರರ ಸಂಘವು ರಾಷ್ಟ್ರಪತಿ, ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ ಪತ್ರ ಬರೆದಿದೆ. 40 ಪರ್ಸೆಂಟ್ ಕಮಿಷನ್ ಇಲ್ಲದೆ ಸರ್ಕಾರದಲ್ಲಿ ಏನು ನಡೆಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಚಿಕ್ಕೋಡಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಅವರು ಮಾತನಾಡಿದರು. 70 ವರ್ಷಗಳಲ್ಲಿ ನಾವು ಏನು ಮಾಡಿದೆವು ಎಂದು ಮೋದಿಜಿ ಅವರು ಯಾವಾಗಲು ಪ್ರಶ್ನಿಸುತ್ತಾರೆ. ಹಾಗಾದರೆ ಆಲಮಟ್ಟಿ ಅಣೆಕಟ್ಟು, ಹಿಡ್ಕಲ್ ಅಣೆಕಟ್ಟು ಮತ್ತು ನಾರಾಯಣಪುರ ಅಣೆಕಟ್ಟುಗಳನ್ನು ಯಾರು ನಿರ್ಮಿಸಿದ್ದಾರೆಂದು ಹೇಳಿ? ನೀವು ಅದನ್ನು ನಿರ್ಮಿಸಿದ್ದೀರಾ? ಅದನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಮಾತಿ ಛಾಟಿ ಬೀಸಿದರು.
ಹಸಿರು ಕ್ರಾಂತಿಯ ಬಗ್ಗೆ ಕಾಂಗ್ರೆಸ್ ಕೊಡುಗೆ . ಆಮದು ಮಾಡಿಕೊಂಡ ಆಹಾರ ಧಾನ್ಯಗಳನ್ನು ಪಿಡಿಎಸ್ ಮೂಲಕ ವಿತರಿಸಲು ನಾವು ಕ್ರಮ ಕೈಗೊಂಡೆವು. ನೆಹರೂಜಿ ಪರಿಚಯಿಸಿದ ಪಂಚವಾರ್ಷಿಕ ಯೋಜನೆಗಳಿಂದಾಗಿ, ನಮ್ಮ ಗೋದಾಮುಗಳು ಇಂದು ಆಹಾರ ಧಾನ್ಯಗಳಿಂದ ತುಂಬಿವೆ ಎಂದರು.