News Karnataka Kannada
Monday, May 06 2024
ಬೆಳಗಾವಿ

ಬೆಳಗಾವಿ: ಅಕ್ರಮ ಸಂಬಂಧ ಹಿನ್ನೆಲೆ ಸ್ನೇಹಿತನ ಬರ್ಬರ ಹತ್ಯೆ

Murder
Photo Credit :

ಬೆಳಗಾವಿ(ಮಾ.08) : ಸ್ನೇಹಿತನ ಬೆನ್ನಿಗೆ ಚೂರಿ ಹಾಕಿದ್ದ ಪಾಪಿ ಒರ್ವ ಸ್ನೇಹಿತನ ಪತ್ನಿಯನ್ನೆ ಬಲೆಗೆ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಸ್ನೇಹಿತನ ಪತ್ನಿಯನ್ನ ಎತ್ತಾಕಿಕೊಂಡು ಹೋಗಿ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಾನೆ. ಇದನ್ನು ಪ್ರಶ್ನಿಸಲೆಂದು ಬಂದ ಸ್ನೇಹಿತ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಬತ್ತದ ಬಣಿವೆಯಲ್ಲಿ ಕರಕಲಾಗಿದ್ದ ವ್ಯಕ್ತಿ ಹೆಸರು ಸಂತೋಷ ಫರಿಟ ವಯಸ್ಸು 36, ಪಕ್ಕದ ಮಹಾರಾಷ್ಟ್ರದ ಚಂದಗಢ ನಗರದವನು, ಸಂತೋಷ ಫರಿಟ ಹಾಗೂ ಬೆಳಗಾವಿ ಸಮೀಪದ ಕಣಬರಗಿ ನಿವಾಸಿ ಪರಶುರಾಮ ಕುರಬರ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ರು.

ಸಂತೋಷ ನ ಬೆನ್ನಿಗೆ ಚೂರಿ ಹಾಕಿದ್ದ ಪರಶುರಾಮ ಸಂತೋಷ ನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಸಾಲದಕ್ಕೆ ತನಗೆ ಚಕ್ಕಂದವಾಡಲು ಅನುಕೂಲವಾಗಲೆಂದು ಸಂತೋಷನ ಹೆಂಡತಿಯನ್ನ ಕಣಬರಗಿಯ ತನ್ನ ಮನೆಗೆ ತಂದು ಇಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸಿದ ಗೆಳೆಯ ಸಂತೋಷನನ್ನ ಆರೋಪಿ ಪರಶುರಾಮ ಕುರುಬರ ಭೀಕರವಾಗಿ ಹತ್ಯೆ ಮಾಡಿ ಭತ್ತದ ಬಣಿವೆಯಲ್ಲಿ ಸುಟ್ಟು ಹಾಕಿದ್ದಾನೆ.

ಬೆಳಗಾವಿಯ ಮಾಲಿನಿ ನಗರದ ಹೊರವಲಯದ ಗದ್ದೆಯಲ್ಲಿ ಸುಟ್ಟು ಕರಕಲಾಗಿ ಬಿದ್ದಿದ್ದ ಮೃತ ದೇಹ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ತಕ್ಷಣ ಮಾಳ ಮಾರುತಿ ಪೋಲಿಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೋಲಿಸರು ಪ್ರಾಥಮಿಕ ತನಿಖೆ ನಡೆಸಿದಾಗ ಯಾವುದೇ ‌ಸುಳಿವು ಪತ್ತೆಯಾಗಿರಲಿಲ್ಲ. ಅಲ್ಲಿಯೇ ಸಮೀಪದಲ್ಲಿ ‌ಇದ್ದ ಸಿಸಿಟಿವಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಒಂದು ಬೈಕ್ ಇಬ್ಬರು ಹೋಗಿದ್ದು ವಾಪಸ್ ಒಬ್ಬರೇ ಬಂದಿರೋದು ಪತ್ತೆಯಾಗಿತ್ತು.

ಮೃತ ವ್ಯಕ್ತಿ ಚಂದಗಢ ಮೂಲದ ಸಂತೋಷ ಫರೀಟ ಎಂದು ಗೊತ್ತಾಗುತ್ತದೆ‌ ಕೊಲೆ ರಹಸ್ಯ ಭೇದಿಸಲು ಮುಂತಾದ ಪೋಲಿಸರಿಗೆ ಸಂತೋಷನ ಪತ್ನಿ ಹಾಗೂ ಪರಶುರಾಮ ಕುರಬರ ನಡುವಿನ ಅನೈತಿಕ ಸಂಬಂಧ ಗೊತ್ತಾಗಿದೆ. ಮಾರ್ಚ 1 ರಂದು ಬೆಳಗಾವಿಯ ಕಣಬರಗಿಗೆ ಬಂದಿದ್ದ ಸಂತೋಷ ಫರೀಟ ನೇರವಾಗಿ ಪರಶುರಾಮ ಕುರಬರ ಮನೆಗೆ ಹೋಗಿದ್ದ.

ತನ್ನ ಪತ್ನಿಯ ಜೊತೆಗಿನ ಅನೈತಿಕ ಸಂಬಂಧದ ಕುರಿತು ಪ್ರಶ್ನಿಸಿದ ಈ ವೇಳೆ ನಮ್ಮಿಬ್ಬರ ನಡುವೆ ಯಾವುದೇ ಅನೈತಿಕ ಸಂಬಂಧ ಇಲ್ಲ ಎಂದು ಸಮರ್ಥಿಸಿಕೊಂಡಿದ್ದ ಪರಶುರಾಮ ಕುರಬರ ಸಂತೋಷನನ್ನ ಪುಸಲಾಯಿಸಿ ತನ್ನ ಬೈಕ್ ಮೇಲೆ ಕರೆದುಕೊಂಡು ಪಾರ್ಟಿ ಮಾಡೋಣವೆಂದು ಮಾಲಿನಿ ನಗರಕ್ಕೆ ಕರೆದುಕೊಂಡು ಬಂದು ಕಂಠ ಪೂರ್ತಿ ಕುಡಿಸಿದ್ದಾನೆ. ಬಳಿಕ ಟವೆಲ್ ನಿಂದ ಕತ್ತು ಹಿಸುಕಿ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಬಳಿಕ ಮೃತ ದೇಹವನ್ನ ಅಲ್ಲಿಯೇ ಇದ್ದ ಭತ್ತದ ಬಣಿವೆಯಲ್ಲಿ ಹಾಕಿ ಸುಟ್ಟು ಪರಾರಿಯಾಗಿದ್ದಾನೆ. ಮಾರ್ಚ1 ರ ರಾತ್ರಿ ಆರೋಪಿ ಪರಶುರಾಮ ಮೃತ ಸಂತೋಷ ನನ್ನ ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು ಪೋಲಿಸರು ಆರೋಪಿ ಪರಶುರಾಮ ಕುರಬರನನ್ನ ಬಂಧಿಸಿದ್ದಾರೆ‌.

ಹೆಂಡತಿ ಹಾಗೂ ಸ್ನೇಹಿತನ ಅನೈತಿಕ ಸಂಬಂಧಕ್ಕೆ ಪಾಪದ ವ್ಯಕ್ತಿ ಒರ್ವ ಬಲಿಯಾಗಿದ್ದು ಮಾಡಬಾರದ್ದನ್ನ ಮಾಡಿರುವ ಆರೋಪಿ ಪರಶುರಾಮ ಜೈಲು ಸೇರಿದ್ದಾನೆ. ಇನ್ನೂ ಮೃತ ಸಂತೋಷ ಇಬ್ಬರು ಮಕ್ಕಳು ಅನಾಥರಾಗಿದ್ದು, ಪರಶುರಾಮನ ಮೂರು ಜನ ಮಕ್ಕಳು ಈಗ ಅನಾಥರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು