ಬೆಳಗಾವಿ,ಡಿ.13 : ಕಾಂಗ್ರೆಸ್ ಪಕ್ಷ ಒಂದು ಸಮುದಾಯದ ಪರವಾಗಿದ್ದು, ಬಹುಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳ ಬಗ್ಗೆಯೂ ಕಾಳಜಿ ಇರಬೇಕು.
ಆದರೆ ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಬಗ್ಗೆಯೇ ಹೆಚ್ಚು ಕಾಳಜಿ ಇದೆ ಎಂದು ದೂರಿದರು. ಮತಾಂತರ ನಿಷೇಧ ಜಾರಿಗೆ ತರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಲವಂತದ ಮತದಾನಕ್ಕೆ ಅವಕಾಶವಿಲ್ಲ. ಇನ್ನಷ್ಟು ಕಠಿಣ ಕಾನೂನು ತರಲಾಗುತ್ತಿದೆ ಎಂದು ಹೇಳಿದರು.