‘ಹಿಂದಿನ ಸರ್ಕಾರವೇ ಜವಾಬ್ದಾರಿ ಹೊತ್ತು ಪೂರ್ವ ಸಿದ್ಧತೆ ನಡೆಸಿತ್ತು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ಮಾರ್ಗದರ್ಶನ ನೀಡಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಗಿದೆ’ ಎಂದರು.
‘ನೀತಿಯಲ್ಲಿ ಆರ್ಎಸ್ಎಸ್ ನೀತಿ ಅಳವಡಿಸಲಾಗಿದೆ’ ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಆರ್ಎಸ್ಎಸ್ ಅಂದ್ರೇನೇ ದೇಶ ತಾನೆ? ಭಾರತೀಯ ತಾನೆ? ನಾವೆಲ್ಲರೂ ಭಾರತೀಯರು, ನಮ್ಮತನವನ್ನು ಅಳವಡಿಸದೆ ಮತ್ತೇನನ್ನು ಅಳವಡಿಸಬೇಕು? ಇಡೀ ಸಮಾಜಕ್ಕಾಗಿ ನಾವೆಲ್ಲರೂ ಸೇರಿ ಮಾಡಿರುವಂಥದು. ಎಲ್ಲರ ಸಲಹೆ– ಸೂಚನೆಗಳನ್ನು ಪಡೆದೆ ರಚಿಸಲಾಗಿದೆ’ ಎಂದರು.