ಬಾಗಲಕೋಟೆ: ಕಲಾದಗಿ ಗುರುಲಿಂಗೇಶ್ವರ ಮಠ ಪೀಠಾಧಿಪತಿ ವಿವಾದ ವಿಚಾರ ಮಠದ ಬಾಗಿಲಿಗೆ ಭಕ್ತರು ಬೀಗ ಜಡಿದಿದ್ದಾರೆ. ಕಳೆದ 2015 ರಲ್ಲಿ ಶ್ರೀಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ ರಂಭಾಪುರಿ ಜಗದ್ಗುರುಗಳು ಗಂಗಾಧರ ಸ್ವಾಮೀಜಿಯವರನ್ನು ಪೀಠಾಧಿಪತಿಯಾಗಿ ನೇಮಿಸಿದ್ದರು.
ಗಂಗಾಧರ ಸ್ವಾಮೀಜಿ ಆಯ್ಕೆಯನ್ನು ಭಕ್ತರು ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ತೀರ್ಪು ಬರುವ ಮೊದಲೇ ನೂತನ ಪೀಠಾಧಿಪತಿಗಳು ಮಠದ ದುರುಸ್ಥಿ ಕಾರ್ಯ ನಡೆಸಿದ್ದು, ಗಂಗಾಧರ ಸ್ವಾಮೀಜಿ ನಮಗೆ ಬೇಡವೇ ಬೇಡ. ಕೋರ್ಟ್ ನಲ್ಲಿ ಪರಿಹಾರವಾದ ನಂತರ ಮಠ ಪ್ರವೇಶಿಸಲಿ ಎಂದು ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.