ಬಾಗಲಕೋಟೆ: ಕೂಡಲಸಂಗಮದಲ್ಲಿ ನಡೆದ 37ನೇ ಶರಣ ಮೇಳದಲ್ಲಿ ಸಿಎಂಗೆ ದಾಸೋಹರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಅನ್ನಭಾಗ್ಯ ಸೇರಿದಂತೆ ವಿವಿಧ ಭಾಗ್ಯಗಳನ್ನು ನೀಡಿದ್ದರಿಂದ ಮುಖ್ಯಮಂತ್ರಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ, ದೇವರೇನಾದ್ರು ಹಣೆ ಬರಹ ಬರೀತಾನಾ, ನರಕ ಸ್ವರ್ಗ ಅನ್ನೋದೆ ಇಲ್ಲಾ. ಆ ಧರ್ಮ, ಈ ಧರ್ಮ ಅಂತ ಹೇಳೋಕೆ ಹೋಗಬಾರದು. ಕೆಲವು ರಾಜಕೀಯ ವ್ಯಕ್ತಿಗಳು ದ್ವೇಷ ಮಾಡ್ತಿದ್ದಾರೆ. ಅದನ್ನ ಮಾಡಕೂಡದು, ಇನ್ನೂ ಜಾತಿ ಹೋಗಿಲ್ಲ, ಅದನ್ನು ಹೋಗಲಾಡಿಸೋದು ಬಸವಾದಿ ಶರಣರಿಂದ ಮಾತ್ರ ಸಾಧ್ಯ. ನಮ್ಮ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ, ಬಸವಾದಿ ಶರಣರಿಂದ ಚಳುವಳಿ ಮುಂದುವರೆಯದ ಕಾರಣ ಜಾತಿ ವ್ಯವಸ್ಥೆ ಮುಂದುವರೆಯಿತು ಅಂತ ಸಿಎಂ ಹೇಳಿದ್ದಾರೆ.