ಬಾಗಲಕೋಟೆ: ನ.7ರ ಸೋಮವಾರ ಬೆಳಗ್ಗೆಯಿಂದ ರಾತ್ರಿ 9 ಗಂಟೆಯವರೆಗೆ ನಡೆದ ಸಮೀರವಾಡಿ ಬೆಲೆ ನಿಗದಿ ಸಭೆಯಲ್ಲಿ ಸುಮಾರು 5,000 ರಿಂದ 6,000 ರೈತರು ಭಾಗವಹಿಸಿದ್ದರು.
ಸಭೆ ರಾತ್ರಿ 9 ಗಂಟೆಯವರೆಗೆ ನಡೆದರೂ ಬೆಲೆಗಳನ್ನು ಘೋಷಿಸದ ಕಾರಣ, ಪ್ರತಿಭಟನಾಕಾರರು ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸಿದರು.
ಬನಹಟ್ಟಿ ಸಿಪಿಐ ಐ.ಎಂ.ಮಠಪತಿ ಹಾಗೂ ಜಮಖಂಡಿ ಗ್ರಾಮೀಣ ಠಾಣೆ ಠಾಣಾಧಿಕಾರಿ ಅವರನ್ನು ರಕ್ಷಿಸಲು ಹೋಗಿದ್ದಾಗ ಕಲ್ಲು ತೂರಾಟದಿಂದ ಸಣ್ಣಪುಟ್ಟ ಗಾಯಗಳಾಗಿವೆ. ಘರ್ಷಣೆಯಲ್ಲಿ ೩ ರಿಂದ ೪ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ರಾತ್ರಿ 9 ಗಂಟೆಗೆ ಗದ್ದಲ ಪ್ರಾರಂಭವಾದ ತಕ್ಷಣ, ಕಾರ್ಖಾನೆಯು ಎಚ್ಚೆತ್ತುಕೊಂಡು ಮತ್ತಷ್ಟು ಅನಾಹುತವನ್ನು ತಪ್ಪಿಸಲು 2900 ರೂ.ಗಳ ದರವನ್ನು ಘೋಷಿಸಿತು.
ಮಠಪತಿ ಮತ್ತು ಜಮಖಂಡಿ ಗ್ರಾಮೀಣ ಠಾಣಾಧಿಕಾರಿಯನ್ನು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.