ಬಾಗಲಕೋಟೆ: ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸದ ಭೀಮಪಲಾಸ ಕಾರ್ಯಕ್ರಮ ಸೆ.12 ರಂದು ಕೋಟೆನಗರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಗಾರ ಸಂಗೀತ ವಿದ್ಯಾಲಯ ಸಂಚಾಲಕ, ಖ್ಯಾತ ತಬಲಾ ವಾದಕ ಕೇಶವ ಜೋಶಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಟರಾಜ ಸಂಗೀತ ವಿದ್ಯಾಲಯ, ಇನ್ಪೋಸಿಸ್ ಫೌಂಡೇಶನ್ ಸೇರಿದಂತೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂದು ಸಂಜೆ 5 ಗಂಟೆಗೆ ಕಲಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ವಿದ್ವಾಂಸ ಬಿಂದುಮಾಧವಾಚಾರ್ಯ ನಾಗಸಂಪಗಿ ಉದ್ಘಾಟಿಸಲಿದ್ದಾರೆ ಎಂದು ಶನಿವಾರ ನಗರದ ಪಕ್ವಾನ್ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿರಿಯ ತಬಲಾ ವಾದಕ ಆರ್.ಎಚ್.ಮೋರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಲಿಗೌಡರ, ಜಿಲ್ಲಾಕಾರಿ ಕೆ.ರಾಜೇಂದ್ರ, ಮಾಜಿ ಶಾಸಕ ಪಿ.ಎಚ್.ಪೂಜಾರ, ಎಲ್ಐಸಿ ಬಾಗಲಕೋಟೆ ಶಾಖೆ ವ್ಯವಸ್ಥಾಪಕ ಮುರಳೀಧರ ಇಲ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇರ್ೇಶಕಿ ಹೇಮಾವತಿ ಎನ್., ಹಿರಿಯ ಗಾಯಕ ಅನಂತ ಕುಲಕ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಭಾರತ ರತ್ನ ಪಂ.ಭೀಮಸೇನ ಜೋಶಿ ಅವರಿಗೂ ಬಾಗಲಕೋಟೆಗೂ ಅವಿನಾಭಾವ ಸಂಬಂಧವಿದೆ. ತಮ್ಮ ಬಾಲ್ಯದ ದಿನಗಳನ್ನು ಐತಿಹಾಸಿಕ ನಗರದಲ್ಲಿ ಕಳೆದಿದ್ದರು. ಇಲ್ಲಿನ ಶಾಮಾಚಾರ್ಯ ಜೋಶಿ ಅವರ ಬಳಿ ಭಕ್ತಿ, ದಾಸವಾಣಿ ಕಲಿಕೆ ಮೂಲಕ ಸಂಗೀತದ ಪಾಠ ಅವರಿಗೆ ಆರಂಭವಾಗಿತ್ತು. ನಂತರ ದೇಶವೇ ಮೆಚ್ಚುವಂತಹ ಸಂಗೀತಗಾರರಾಗಿ, ಭಾರತ ರತ್ನ ಪ್ರಶಸ್ತಿಗೂ ಭಾಜನರಾದರು. ಅವರ ಜನ್ಮ ಶತಾಬ್ಧಿ ಅಂಗವಾಗಿ ನಾಡಿನಲ್ಲಿ ವಿವಿಧ ಸರಣಿ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ಬಳಿಕ ನಾಡಿನ ಶ್ರೇಷ್ಠ ಕಲಾವಿದ ಜಯತೀರ್ಥ ಮೇವುಂಡಿ ಗಾಯನ ಕಾರ್ಯಕ್ರಮ ನಡೆಯಲಿದೆ. ಕೇಶವ ಜೋಶಿ ತಬಲಾ, ರವೀಂದ್ರ ಕಾಟೋಟಿ ಹಾಮರ್ೋನಿಯಂ ಸಾಥ್ ನೀಡಲಿದ್ದಾರೆ. ಅಲ್ಲದೆ ಹಾರ್ಮೋರ್ಯಂ ಸೋಲೋ ಕಾರ್ಯಕ್ರಮ ಕೂಡಾ ಜರುಗಲಿದೆ. ಸಾರ್ವಜನಿಕರಿಗೆ ಮುಕ್ತವಾಗಿ ಆಗಮಿಸಬೇಕು. ಕೋವಿಡ್ ಮುಂಜಾಗೃತವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಮನವಿ ಮಾಡಿದರು.
ಸಂಘಟಕರಾದ ವಿಷ್ಣು ಜೋಶಿ, ವಿನಯ ಕುಲಕರ್ಣಿ , ಪ್ರವೀಣ ಮಂಕಣಿ, ಶ್ರೀನಿವಾಸ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.