News Karnataka Kannada
Monday, April 29 2024
ಬಾಗಲಕೋಟೆ

ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸವ

New Project 2021 09 11t213127.490
Photo Credit :

ಬಾಗಲಕೋಟೆ: ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸದ ಭೀಮಪಲಾಸ ಕಾರ್ಯಕ್ರಮ ಸೆ.12 ರಂದು ಕೋಟೆನಗರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಗಾರ ಸಂಗೀತ ವಿದ್ಯಾಲಯ ಸಂಚಾಲಕ, ಖ್ಯಾತ ತಬಲಾ ವಾದಕ ಕೇಶವ ಜೋಶಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಟರಾಜ ಸಂಗೀತ ವಿದ್ಯಾಲಯ, ಇನ್ಪೋಸಿಸ್ ಫೌಂಡೇಶನ್ ಸೇರಿದಂತೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂದು ಸಂಜೆ 5 ಗಂಟೆಗೆ ಕಲಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ವಿದ್ವಾಂಸ ಬಿಂದುಮಾಧವಾಚಾರ್ಯ ನಾಗಸಂಪಗಿ ಉದ್ಘಾಟಿಸಲಿದ್ದಾರೆ ಎಂದು ಶನಿವಾರ ನಗರದ ಪಕ್ವಾನ್ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಿರಿಯ ತಬಲಾ ವಾದಕ ಆರ್.ಎಚ್.ಮೋರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಲಿಗೌಡರ, ಜಿಲ್ಲಾಕಾರಿ ಕೆ.ರಾಜೇಂದ್ರ, ಮಾಜಿ ಶಾಸಕ ಪಿ.ಎಚ್.ಪೂಜಾರ, ಎಲ್ಐಸಿ ಬಾಗಲಕೋಟೆ ಶಾಖೆ ವ್ಯವಸ್ಥಾಪಕ ಮುರಳೀಧರ ಇಲ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇರ್ೇಶಕಿ ಹೇಮಾವತಿ ಎನ್., ಹಿರಿಯ ಗಾಯಕ ಅನಂತ ಕುಲಕ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಭಾರತ ರತ್ನ ಪಂ.ಭೀಮಸೇನ ಜೋಶಿ ಅವರಿಗೂ ಬಾಗಲಕೋಟೆಗೂ ಅವಿನಾಭಾವ ಸಂಬಂಧವಿದೆ. ತಮ್ಮ ಬಾಲ್ಯದ ದಿನಗಳನ್ನು ಐತಿಹಾಸಿಕ ನಗರದಲ್ಲಿ ಕಳೆದಿದ್ದರು. ಇಲ್ಲಿನ ಶಾಮಾಚಾರ್ಯ ಜೋಶಿ ಅವರ ಬಳಿ ಭಕ್ತಿ, ದಾಸವಾಣಿ ಕಲಿಕೆ ಮೂಲಕ ಸಂಗೀತದ ಪಾಠ ಅವರಿಗೆ ಆರಂಭವಾಗಿತ್ತು. ನಂತರ ದೇಶವೇ ಮೆಚ್ಚುವಂತಹ ಸಂಗೀತಗಾರರಾಗಿ, ಭಾರತ ರತ್ನ ಪ್ರಶಸ್ತಿಗೂ ಭಾಜನರಾದರು. ಅವರ ಜನ್ಮ ಶತಾಬ್ಧಿ ಅಂಗವಾಗಿ ನಾಡಿನಲ್ಲಿ ವಿವಿಧ ಸರಣಿ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ಬಳಿಕ ನಾಡಿನ ಶ್ರೇಷ್ಠ ಕಲಾವಿದ ಜಯತೀರ್ಥ ಮೇವುಂಡಿ ಗಾಯನ ಕಾರ್ಯಕ್ರಮ ನಡೆಯಲಿದೆ. ಕೇಶವ ಜೋಶಿ ತಬಲಾ, ರವೀಂದ್ರ ಕಾಟೋಟಿ ಹಾಮರ್ೋನಿಯಂ ಸಾಥ್ ನೀಡಲಿದ್ದಾರೆ. ಅಲ್ಲದೆ ಹಾರ್ಮೋರ್ಯಂ ಸೋಲೋ ಕಾರ್ಯಕ್ರಮ ಕೂಡಾ ಜರುಗಲಿದೆ. ಸಾರ್ವಜನಿಕರಿಗೆ ಮುಕ್ತವಾಗಿ ಆಗಮಿಸಬೇಕು. ಕೋವಿಡ್ ಮುಂಜಾಗೃತವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಮನವಿ ಮಾಡಿದರು.
ಸಂಘಟಕರಾದ ವಿಷ್ಣು ಜೋಶಿ, ವಿನಯ ಕುಲಕರ್ಣಿ , ಪ್ರವೀಣ ಮಂಕಣಿ, ಶ್ರೀನಿವಾಸ ಕುಲಕರ್ಣಿ  ಸುದ್ದಿಗೋಷ್ಠಿಯಲ್ಲಿ ಇದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು