ಬಾಗಲಕೋಟೆ: ನದಿಯೊಂದರಲ್ಲಿ ನಡೆದ ಅವಘಡದಲ್ಲಿ ಅಪ್ಪ-ಮಗಳ ಸಹಿತ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಆ ಪೈಕಿ ಇಬ್ಬರ ಶವ ಪತ್ತೆಯಾಗಿದ್ದು, ಇನ್ನೊಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾದ ಶ್ರೀದೇವಿ ಮಾವಿನಮರದ (32), ವಿಶ್ವನಾಥ ಮಾವಿನಮರದ (40) ಮತ್ತು ನಂದಿನಿ ಮಾವಿನಮರದ (12) ಮೃತಪಟ್ಟವರು.
ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದ ಇವರು ಕುಟುಂಬದ ಒಟ್ಟು ಆರು ಜನರೊಂದಿಗೆ ಬಾದಾಮಿಯ ಬನಶಂಕರಿ ದೇವಿಯ ದರ್ಶನಕ್ಕೆ ಆಗಮಿಸಿದ್ದರು. ದೇವಿ ದರ್ಶನ ಪಡೆದ ಬಳಿ ಬಾದಾಮಿಯ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ್ದರು.
ನಂತರ ಊಟ ಸೇವಿಸಲು ಶಿವಯೋಗಮಂದಿರದ ಬಳಿ ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಊಟದ ಬಳಿಕ ಶ್ರೀದೇವಿ ಮಾವಿನಮರದ ಅವರು ನದಿಯಲ್ಲಿ ಕೈ ತೊಳೆಯಲು ಹೋಗಿ ಕಾಲು ಜಾರಿ ಆಯತಪ್ಪಿ ನೀರಿಗೆ ಬಿದ್ದಿದ್ದರು.