ಬಾಗಲಕೋಟೆ: ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮೋಸದಾಟ ನಡೆಯುವುದಿಲ್ಲ. 2024 ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಹೀನಾಯ ಸ್ಥಿತಿ ಬರಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವನ್ನು ಜಗತ್ತಿನಲ್ಲಿ ಹಿರಿಯಣ್ಣನ ಸ್ಥಾನಕ್ಕೆ ಭಾರತವನ್ನು ತರಬೇಕು ಎಂಬ ಕಲ್ಪನೆಯನ್ನು ಇಟ್ಟುಕೊಂಡು ಆಡಳಿತ ಮಾಡುತ್ತಿರುವ ಮೋದಿಯವರ ಹಿಂದೆ ೪೦ ವರ್ಷದೊಳಗಿನ ಯುವಕರು ಕೈ ಜೋಡಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಣ ಎಲ್ಲ ಕಡೆ ನೆಲ ಕಚ್ಚುತ್ತಿದೆ ಎಂದು ಹೇಳಿದರು.
ವಿಶ್ವದ ನಾಯಕನ ಸ್ಥಾನದಲ್ಲಿ ಭಾರತ ಬರಬೇಕು ಎಂದು ಬಿಜೆಪಿಗೆ ಇದೆ. ಆದರೆ ಕಾಂಗ್ರೆಸ್ ಮಾತ್ರ ಅಭಿವೃದ್ಧಿ ಬಗ್ಗೆ ಹಾಗೂ ದೇಶದ ಬಗ್ಗೆ ಚಿಂತನೆ ಮಾಡಿದ್ದರೆ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದರು.
ಜನರ ನಾಡಿ ಮಿಡಿತ ಗೊತ್ತಾಗಿದ್ದರೆ ಆಡಳಿತ ಮಾಡಿದ್ದರೆ ದೇಶದ ಕಲ್ಪನೆಯನ್ನು ಹಾಗೂ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದ್ದರೆವಿರೋಧ ಪಕ್ಷದಲ್ಲಿ ಇರುತ್ತಿರಲಿಲ್ಲ ಎಂದರು.
ಮುಂದಿನ ವಿಧಾನಸಭೆಯ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪಾಗಿ ಪರಿಣಮಿಸಲಿದೆ. ಹಾಲು ಕುಡಿದು ಸಾಯುವವರಿಗೆ ವಿಷ ಹಾಕುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಕಾಂಗ್ರೆಸ್ ಹಂತಹಂತವಾಗಿ ಕೆಟ್ಟ ಸೋಲುಂಡು ದೇಶದಲ್ಲಿ ಈಗ ಕಾಂಗ್ರೆಸ್ ಹೆಸರಿಲ್ಲದಂತೆ ಆಗುತ್ತಿದೆ ಎಂದು ಹೇಳಿದರು.
ಕೃಷ್ಣೆಯ ಹೆಸರು ಹೇಳಿಕೊಂಡು ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ನೀರಾವರಿ ಯೋಜನೆಗಳನ್ನು ಪೂರ್ಣ ಗೊಳಿಸಲಿಲ್ಲ.ಸಂಗಮನಾಥನ ಹೆಸರಿಲ್ಲಿಆಣೆ ಪ್ರಮಾಣ ಮಾಡಿದವರು ಹತ್ತು ಸಾವಿರ ಕೋಟಿ ರೂ.ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡುತ್ತೇವೆ ಎಂದವರು ಏನೂ ಮಾಡಲಿಲ್ಲ.ದೇಶದಲ್ಲಿ ನೀರಾವರಿ ಯೋಜನೆಗೆ ಅನ್ಯಾಯ ಮಾಡಿದ್ದವರು ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷದವರು ಮಾತ್ರ ಎಂದರು.