ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಬಂದ್ ಆಗಿದ್ದ ಮದುವೆ ಸಮಾರಂಭಗಳು ಶುರುವಾಗಿವೆ. ಇದರ ಬೆನ್ನಲ್ಲೇ ಧಾರವಾಡದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ.
ಧಾರವಾಡದ ಸತ್ತೂರ ಗ್ರಾಮದ ಕೇರಿ ಓಣಿ ಸತ್ತೂರಿನ ಕುಮಾರ ಎಂಬುವವರು ಧಾರವಾಡದ ಸಾರಸ್ವತಪುರದ ಶ್ವೇತಾ ಎಂಬಾಕೆಯನ್ನು ವರಿಸಿದ್ದಾರೆ. ಎರಡೂ ಮನೆಯವರು ಭಾಗವಹಿಸುವ ಮೂಲಕ ಸರಳವಾಗಿ ವಿವಾಹ ಸಮಾರಂಭ ನೆರವೇರಿಸಿದ್ದಾರೆ.ಹಸೆಮಣೆ ಏರಿದ ವಿಶೇಷಚೇತನರುಸತ್ತೂರಿನ ಕುಮಾರನಿಗೆ ಬಾಲ್ಯದಿಂದಲೂ ಕಿವಿಯೂ ಕೇಳದು, ಮಾತು ಸಹ ಬರೋದಿಲ್ಲ. ಮನೆಯಲ್ಲಿ ಈತನೇ ಹಿರಿಮಗ. ಹೀಗಾಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಹೋಗುವ ಕುಮಾರನಿಗೆ ಇವನಂತೆಯೇ ಇರುವ ಹುಡುಗಿಯನ್ನು ಹುಡುಕುತ್ತಾ ಇದ್ದಾಗ ಸಾರಸ್ವತಪುರದ ಶ್ವೇತಾಳನ್ನು ನೋಡಿದ್ದರು. ಆಗ ಕುಮಾರನೂ ಇಷ್ಟಪಟ್ಟಿದ್ದಾನೆ.ಶ್ವೇತಾ ಮನೆಯಲ್ಲಿ ಇದ್ದುಕೊಂಡು ಕಸೂತಿ ಕಲೆ ಕೆಲಸ ಮಾಡಬಲ್ಲವಳಾಗಿದ್ದಾಳೆ. ಇದೀಗ 40 ಜನರ ಮಿತಿಯೊಳಗೆ ಕೊರೊನಾ ನಿಯಮ ಪಾಲಿಸಿ ಮದುವೆ ಮಾಡಿಕೊಂಡಿದ್ದಾರೆ.
ಧಾರವಾಡದಲ್ಲಿ ವೈವಾಹಿಕ ಬಂಧನಕ್ಕೊಳಗಾದ ವಿಶೇಷ ಚೇತನ ಜೋಡಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.