News Karnataka Kannada
Friday, May 10 2024
ಕರ್ನಾಟಕ

10 ಲಕ್ಷ ಜನಸಂಖ್ಯೆ ಇರಬೇಕಿದೆ ಹಾಗಿದ್ದಾಗ ಮಾತ್ರ ಕಮಿಷನರೇಟ್ ಕಚೇರಿ ರಚನೆ ಆಗಲಿದೆ: ರಾಜ್ಯ ಪೊಲೀಸ್ ಮಹಾನಿರ್ದೇಶಕ 

Photo Credit :

10 ಲಕ್ಷ ಜನಸಂಖ್ಯೆ ಇರಬೇಕಿದೆ ಹಾಗಿದ್ದಾಗ ಮಾತ್ರ ಕಮಿಷನರೇಟ್ ಕಚೇರಿ ರಚನೆ ಆಗಲಿದೆ: ರಾಜ್ಯ ಪೊಲೀಸ್ ಮಹಾನಿರ್ದೇಶಕ 

ಶಿವಮೊಗ್ಗ: ಕೊರೋನ ಸಂದರ್ಭದಲ್ಲಿ ಕಷ್ಟಪಟ್ಟು ಪೊಲೀಸರು ಕೆಲಸ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಮತ್ತೆ ಕೊರೋನ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಕೊರೋನ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ನಿಯಮಾಬಳಿ ಪಾಲಿಸಬೇಕಿದೆ. ಶೇ. 80% ಕೊರೋನ ವ್ಯಾಕ್ಸಿನೇಷನ್ ನ್ನ ಪೊಲೀಸರು ಪಡೆದಿದ್ದಾರೆ.

ಇತರರಿಗೆ ಮನವರಿಕೆ ಮಾಡಿ ವ್ಯಾಕ್ಸಿನೇಷನ್ ಕೊಡಿಸಬೇಕು. ಡಿಸಿ ಜೊತೆ ಚರ್ಚಿಸಿ ಸಾರ್ವಜನಿಕವಾಗಿ ಕೊರೋನ ನಿಯಮಾವಳಿಯನ್ನ ಪಾಲಿಸುವಂತೆ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು.

ಶಿವಮೊಗ್ಗದಲ್ಲಿ ಕೆಲ ಸಮಸ್ಯೆಗಳನ್ನ ನನ್ನ ಗಮನಕ್ಕೆ ಅಧಿಕಾರಿಗಳು ತಂದಿದ್ದಾರೆ. ಠಾಣೆಗಳಲ್ಲಿ ಕೆಲ ಪೊಲೀಸರ ಹುದ್ದೆ ಭರ್ತಿ ಆಗಬೇಕಿದೆ. ಯಾವ ಯಾವ ಠಾಣೆಯಲ್ಲಿ‌ಮ್ಯಾನ್ ಪವರ್ ಸಮಸ್ಯೆ ಇದೆ. ಅದನ್ನ ನನ್ನ ಗಮನದಲ್ಲಿಟ್ಟುಕೊಂಡಿದ್ದೇನೆ. ಇತ್ತೀಚೆಗೆ ಅಪಗ್ರೇಡ್ ಆಗದವೆ.

8-9 ಪೊಲೀಸ್ ಹುದ್ದೆ ಹೆಚ್ಚಾಗಿದೆ. ಯಾವರೀತಿ ಒಳ್ಳೆಯ ರೀತಿ ಉಪಯೋಗವಾಗಬೇಕು. ಪ್ರಕರಣಗಳು ಹೇಗೆ ವಿಲೆ ಮಾಡಬೇಕು ನೋಡಬೇಕಿದೆ. ಗಾಂಜಾ ಪ್ರಕರಣವನ್ನ ಹೇಗೆ ನಿಭಾಯಿಸಬೇಕು ಕಾದು ನೋಡಬೇಕಿದೆ ಎಂದರು.

ಹಿಂದಿನ ಎಸ್ಪಿಯಿಂದ ಒಳ್ಳೆಯ ಕೆಲಸವಾಗಿದೆ. ಶಿವಮೊಗ್ಗದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಿಸುವ ಕುರಿತು ಸರ್ಕಾರದ ನಿರ್ಧಾರವಾಗಿದೆ. ಆಯುಕ್ತಾಲಯದ ರಚನೆ ಕುರಿತು ತಾಂತ್ರಿಕ ಸಮಸ್ಯೆಗಳಿವೆ. 10 ಲಕ್ಷ ಜನಸಂಖ್ಯೆ ಇರಬೇಕಿದೆ ಹಾಗಿದ್ದಾಗ ಮಾತ್ರ ಕಮಿಷನರೇಟ್ ಕಚೇರಿ ರಚನೆ ಆಗಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು