ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಹೊಳೆಗೆ ಉರುಳಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಆದಿತ್ಯವಾರ ಸಂಜೆ ನೀಲೇಶ್ವರ ಬಳಿ ನಡೆದಿದೆ. ಮೃತಪಟ್ಟವನನ್ನು ಮುಹಮ್ಮದ್ ಶೆರೂಬ್ ( ೨೨) ಎಂದು ಗುರುತಿಸಲಾಗಿದೆ.
ಮನೆಯಿಂದ ನೀಲೇಶ್ವರ ಪೇಟೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಹೊಳೆಗೆ ಉರುಳಿ ಬಿದ್ದಿದ್ದು , ಸ್ಥಳೀಯರು , ಪೊಲೀಸರು ಯುವಕನನ್ನು ಮೇಲಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದರು .