ಕಾರವಾರ: ಸೀಬರ್ಡ್ ನೌಕಾನೆಲೆಯಲ್ಲಿ ಗುತ್ತಿಗೆ ಪಡೆದ ಶಾಪೂರ್ಜಿ ಮತ್ತು ಪಾಲನಜೀ ಕಂಪೆನಿಯವರು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೆ ಎಂದು ಕಾರ್ಮಿಕರು ಜಿಲ್ಲಾಡಳಿತಕ್ಕೆ ದೂರಿದ್ದಾರೆ.
ಪಾಲನಜೀ ಕಂಪೆನಿಯಲ್ಲಿ ಶ್ರೀ ಮಾಹಾದೇವ ಸ್ಥಳೀಯ ಹಾಗೂ ಸೀಬರ್ಡ್ ನಿರಾಶ್ರಿತರ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಂಪೆನಿಯಿಂದ ದಬ್ಬಾಳಿಕೆಯಾಗುತ್ತಿದೆ.
ಕಾರ್ಮಿಕರ ಮೇಲಾಗುವ ದಬ್ಬಾಳಿಕೆಯ ಬಗ್ಗೆ ಆ ಕಂಪೆನಿಯ ಮುಖ್ಯಸ್ಥರ ಗಮನಕ್ಕೂ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಈ ಕಂಪೆನಿ ಸ್ಥಳೀಯ ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸುವ ಕೆಲಸ ಮಾಡುತ್ತಿದೆ. ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಹೇಳಿಕೊಳ್ಳಲು ಮುಂದಾದವರಿಗೆ ಕೆಲಸದಿಂದ ತೆಗೆದು ಹಾಕಿದ್ದಾರೆ.
ಕೆಲಸದಿಂದ ಕೈ ಬಿಟ್ಟಿರುವ ಕಾರ್ಮಿಕರನ್ನು ತಕ್ಷಣದಿಂದ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳಬೇಕು.
ಅಷ್ಟೇ ಅಲ್ಲದೆ ಕಾರ್ಮಿಕರ ವೇತನವನ್ನು ಸರಿಯಾದ ಸಮಯಕ್ಕೆ ನೀಡುವಂತಾಗಬೇಕು. ಎಲ್ಲಾ ಕಾರ್ಮಿಕರಿಗೆ ಪಿಎಫ್ ಹಾಗೂ ವೇತನ ರಸೀದಿ ನೀಡಬೇಕು. ಹಿಂದಿನಂತೆ ನಮ್ಮ ಸಂಘದಿಂದ ಸಾಮಗ್ರಿಗಳನ್ನು ಪೂರೈಸಿಕೊಳ್ಳಬೇಕು. ಬಾಡಿಗೆ ತೆಗೆದುಕೊಂಡಿರುವ ವಾಹನದ ಬಾಡಿಗೆಯನ್ನು ಸರಿಯಾದ ಸಮಯಕ್ಕೆ ನೀಡಬೇಕು. ಕಳೆದ ಅನೇಕ ವರ್ಷದಿಂದ ಈ ಕಂಪೆನಿಗೆ ನಾವು ಸಾಮಗ್ರಿಯನ್ನು ಪೂರೈಕೆ ಮಾಡಿಕೊಂಡು ಬಂದಿದ್ದೇವೆ. ಆದರೆ ಇದೀಗ ಏಕಾಏಕಿಯಾಗಿ ನಮ್ಮಿಂದ ಸಾಮಗ್ರಿ ಖರೀದಿ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಕಾರವಾರ, ಅಂಕೋಲಾ ಸಾಮಗ್ರಿ ಪೂರೈಕೆ ಗುತ್ತಿಗೆದಾರರಿಗೆ ನಷ್ಟದಲ್ಲಿದ್ದಾರೆ ಎಂದು ದೂರಲಾಗಿದೆ.
ಈ ರೀತಿ ದಬ್ಬಾಳಿಕೆ ಮುಂದುವರೆದಲ್ಲಿ ಶಾಪೂರ್ಜಿ ಮತ್ತು ಪಾಲನಜೀ ಕಂಪೆನಿಯ ವಿರುದ್ಧ ಮುಖ್ಯದ್ವಾರದ ಎದುರು ಪ್ರತಿಭಟನೆ ಮಾಡುವುದುದಾಗಿ ಶ್ರೀ ಮಹಾದೇವ ಸ್ಥಳೀಯ ನಿರಾಶ್ರಿತರ ಹಾಗೂ ಸೀಬರ್ಡ್ ನಿರಾಶ್ರಿತರ ಮತ್ತು ಕೂಲಿ ಕಾರ್ಮಿಕರ ಅಭಿವೃದ್ಧಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ದೂರಿದ್ದಾರೆ.