News Karnataka Kannada
Friday, May 10 2024
ಕರ್ನಾಟಕ

ಸಂಸದ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಜೀವ ಬೆದರಿಕೆ ಕರೆ

Photo Credit :

  ಸಂಸದ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಜೀವ ಬೆದರಿಕೆ ಕರೆ

ಶಿರಸಿ , ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೋರ್ವ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಸಂಸದರ ಆಪ್ತ ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಏಪ್ರಿಲ್ 5ರ ಮುಂಜಾನೆ ಎರಡು ಘಂಟೆ ವೇಳೆಗೆ ಸಂಸದರ ಮನೆಯ ಲ್ಯಾಂಡ್ ಲೈನ್‌ಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿದ್ದಾನೆ. ಮೊದಲು ರಿಂಗ್ ಮಾಡಿ ಕಟ್ ಮಾಡಿದ್ದು, ನಂತರ ಕರೆಯನ್ನ ಸ್ವತಃ ಸಂಸದರೇ ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ನೀನು ಎಂಪಿ ಅನಂತಕುಮಾರ್ ಹೆಗಡೆ ಅಲ್ವಾ? ನೀನು ಈ ಬಾರಿ ಏನು ಮಾಡುತ್ತೀಯಾ? ಹಿಂದಿನ ಬಾರಿ ಫೋನ್ ಮಾಡಿದಾಗ ಪೊಲೀಸರಿಗೆ ದೂರು ನೀಡಿದ್ದೀಯಾ. ಪತ್ರಿಕೆಗಳಲ್ಲಿ ಸುದ್ದಿ ಸಹ ಆಗಿತ್ತು. ಈಗ ನಿನ್ನನ್ನು ಏನು ಮಾಡುತ್ತೇನೆ ನೋಡು. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಸುಮಾರು ಎರಡು ನಿಮಿಷಗಳ ಕಾಲ ಮಾತನಾಡಿದ್ದು, ಅದರ ನಂತರ ಕೆಲವು ಮಾತುಗಳು ಸ್ಪಷ್ಟವಾಗಿ ಕೇಳಿಸದೇ ಫೋನ್ ಖಡಿತಗೊಂಡಿದೆ. ಈ ಬಗ್ಗೆ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಮಾರುಕಟ್ಟೆ ಠಾಣೆಗೆ ಸಂಸದರ ಪರವಾಗಿ ದೂರನ್ನು ನೀಡಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಅನಂತಕುಮಾರ್ ಹೆಗಡೆಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆ ಸಹ ಹಲವು ಬಾರಿ ಕರೆಗಳು ಬಂದಿದ್ದು, ಸಂಸದರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಅಲ್ಲದೇ ಒಮ್ಮೆ ಅನಾಮಧೇಯ ಬೆದರಿಕೆ ಪತ್ರ ಸಹ ಬಂದಿದ್ದು, ಆಗ ಸಹ ದೂರು ದಾಖಲಿಸಲಾಗಿತ್ತು. ಇಂಟರ್‌ನೆಟ್ ಕರೆ ಅಥವಾ ವಿದೇಶಿ ನಂಬರ್‌ನಿಂದ ಕರೆ ಬರುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕೇವಲ ದೂರು ದಾಖಲಿಸಿಕೊಳ್ಳುವುದನ್ನು ಮಾತ್ರ ಮಾಡದೇ ತನಿಖೆಯನ್ನು ಮಾಡಿ, ಕರೆ ಮಾಡಿದವರ ಬಂಧನವನ್ನು ಮಾಡಬೇಕಾಗಿದೆ. ಸಂಸದರಿಗೆ ಹಲವು ಬೆದರಿಕೆ ಕರೆ ಬರುತ್ತಿದ್ದರೂ ಪೊಲೀಸರು ಆರೋಪಿಗಳನ್ನು ಹಿಡಿಯುತ್ತಿಲ್ಲ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು