News Karnataka Kannada
Monday, May 13 2024
ಕರ್ನಾಟಕ

ಶ್ರೀ ಮರಡಿಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ ಜೋಡಿ ರಥೋತ್ಸವ

Photo Credit :

ಶ್ರೀ ಮರಡಿಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ ಜೋಡಿ ರಥೋತ್ಸವ

ಕೆ.ಆರ್.ಪೇಟೆ: ತಾಲ್ಲೂಕಿನ ನಗರೂರು ಮಾರ್ಗೋನಹಳ್ಳಿ ಸಮೀಪವಿರುವ   ಹಾಲುಮತ ಸಮಾಜದ ಪವಿತ್ರ  ಪುಣ್ಯಕ್ಷೇತ್ರ ಶ್ರೀ ಮರಡಿಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ   ದೊಡ್ಡಯ್ಯ-ಚಿಕ್ಕಯ್ಯ  ಜೋಡಿ ರಥೋತ್ಸವವು   ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀನಿವಾಸ್ ಅವರು ಜಾತ್ರೆ ಮತ್ತು ರಥೋತ್ಸವ, ಹಬ್ಬ ಹರಿ ದಿನಗಳು ಸಂಸ್ಕೃತಿ ಪರಂಪರೆಯ ಪ್ರತೀಕವಾಗಿವೆ. ಹಾಗಾಗಿ ಎಲ್ಲರೂ ಜಾತ್ರೆ ರಥೋತ್ಸವದಲ್ಲಿ ಭಾಗವಹಿಸುವ  ಮೂಲಕ ನಮ್ಮ ಸಂಸ್ಕೃತಿಯನ್ನು  ಉಳಿಸಬೇಕು.  ನಮ್ಮ ಮರಡಿಲಿಂಗೇಶ್ವರ ಸ್ವಾಮಿಯು ದಕ್ಷಿಣ ಕರ್ನಾಟಕದ  ಹಾಲು ಮತ ಸಮಾಜದ ಪವಿತ್ರ ಪುಣ್ಯ ಕ್ಷೇತ್ರವಾಗಿದೆ ಈ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಚಿವರಾದ ನಾರಾಯಣಗೌಡರು ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರಕ್ಕೆ ಬರುವ  ಭಕ್ತಾಧಿಗಳಿಗೆ ಯಾತ್ರಿನಿವಾಸ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಒದಗಿಸಿಕೊಡಲು ಶ್ರಮಿಸಲಾಗುವುದು ಎಂದು ಹೇಳಿದರು.  

ಕುರುಬ ಸಮುದಾಯದ ಬಂಧುಗಳು ತಮ್ಮ ಕುರಿಗಳ  ಹಿಂಡುಗಳೊಂದಿಗೆ  ಆಗಮಿಸಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಹರಕೆ ತೀರಿಸುವುದು ಇಲ್ಲಿನ ಪ್ರಧಾನ  ಸಂಪ್ರದಾಯವಾಗಿದೆ. ಅದರಂತೆ ನೂರಾರು ಕುರಿಗಳನ್ನು ಕರೆತಂದು ರಥೋತ್ಸವಕ್ಕೆ ಮುನ್ನ ಪ್ರದಕ್ಷಿಣೆ ಮಾಡಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು