ಶಿವಮೊಗ್ಗ: ಬೆಲವಂತನಕೊಪ್ಪ ಗ್ರಾಮದ ನಡುವಲಕಟ್ಟೆ ಕೆರೆಗೆ ಈಜಲೆಂದು ತೆರಳಿದ್ದ ೬ ವಿದ್ಯಾರ್ಥಿಗಳಲ್ಲಿ ಇಬ್ಬರು ನೀರುಪಾಲಾಗಿರುವ ಘಟನೆ ಶನಿವಾರ ನಡೆದಿದೆ.
ಶನಿವಾರ ಶಾಲೆ ಮುಗಿಸಿ ಬಂದ ೬ ವಿದ್ಯಾರ್ಥಿಗಳು ಗ್ರಾಮದಲ್ಲಿರುವ ಕೆರೆಗೆ ಈಜಲೆಂದು ತೆರಳಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಶಂಭು(೧೪) ಹಾಗೂ ಉದಯ್(೧೫)ಎಂದು ಗುರುತಿಸಲಾಗಿದೆ.
ಕೆರೆಯ ಆಳ ತಿಳಿಯದೆ ಮಕ್ಕಳು ಇಳಿದಿದ್ದರಿಂದ ಈ ಅವಘಡ ಸಂಭವಿಸಿದೆ.