ಮೈಸೂರು: ಶಾಸಕ ತನ್ವೀರ್ ಸೇಠ್ ಕೆಲಸ ಕೇಳಲು ಹೋದಾಗ ತನ್ನನ್ನು ಸರಿಯಾಗಿ ಉಪಚರಿಸದಕ್ಕೆ ಕೋಪಗೊಂಡು ಕೊಲ್ಲಲು ಯತ್ನಿಸಿರುವುದಾಗಿ ಆರೋಪಿ ಪರ್ಹಾನ್ ಪಾಷಾ ಹೇಳಿಕೊಂಡಿದ್ದಾನೆ.
ಈ ರೀತಿ ನಡೆದುಕೊಳ್ಳುವ ಪ್ರತಿನಿಧಿ ಬೇಡ. ಕೆಲಸ ಕೇಳಲು ಹೋದಾಗ ಸರಿಯಾಗಿ ಉಪಚರಿಸಲಿಲ್ಲ. ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಶಾಸಕ ತನ್ವೀರ್ ಸೇಠ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.