ಮಡಿಕೇರಿ: ಕರ್ನಾಟಕ ಬಂದ್ ಗೆ ಬಿಜೆಪಿ ಕರೆ ನೀಡಿದ ಹಿನ್ನೆಲೆ ವಿರಾಜಪೇಟೆಯಲ್ಲಿ ಖಾಸಗಿ ಬಸ್ ಗಳು ರಸ್ತೆಗಿಳಿಯದೆ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಗೋಣಿಕೊಪ್ಪದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಮಡಿಕೇರಿಯಲ್ಲಿ ಶಾಸಕರಿಂದ ವಾಹನ ಸಂಚಾರಕ್ಕೆ ತಡೆ ಹಾಕಿದ್ದು ಕೆಲಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ರೈತರ ಸಾಲಮನ್ನಕ್ಕೆ ಅಗ್ರಹಿಸಿ ಬಿ.ಜೆ.ಪಿ ನೀಡಿರುವ ಬಂದ್ ಕರೆಗೆ ಗೋಣಿಕೊಪ್ಪಲಿನಲ್ಲಿ ಅಂಗಡಿಮುಂಗಟ್ಟನ್ನು ಮುಚ್ಚಿ, ಖಾಸಗಿ ಬಸ್ಸುಗಳು ಬಂದ್ ಮಾಡುವುದರ ಮೂಲಕ ಬಂದ್ಗೆ ಬೆಂಬಲ ನೀಡುತ್ತಿದ್ದಾರೆ. ಕೆ.ಎಸ್ .ಆರ್ .ಟಿ .ಸಿ ಬಸ್ಸುಗಳು ಎಂದಿನಂತೆ ಸಂಚಾರ