ಶಿವಮೊಗ್ಗ: ಒಂದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಸಂಜೆ ಶಿವಮೊಗ್ಗದಲ್ಲಿ ನಡೆದಿದೆ.
ಮೃತ ದಂಪತಿಯನ್ನು ಸಂತೋಷ್(31),ಪಾರ್ವತಿ(27)ಎಂದು ಗುರುತಿಸಲಾಗಿದೆ.
ತಮ್ಮ ಮನೆಯಲ್ಲೇ ಈ ದಂಪತಿ ನೇಣಿಗೆ ಶರಣಾಗಿದೆ. ಭೂಮಿ ಹುಣ್ಣಿಮೆ ಹಬ್ಬದ ಹಿನ್ನೆಲೆ ದಂಪತಿ ಸೇರಿ ಅಡುಗೆ ತಯಾರಿಸಿದ್ದರು. ಮನೆಯವರನ್ನು ಗದ್ದೆಗೆ ಕಳುಹಿಸಿದ ಬಳಿಕ ನೇಣಿಗೆ ಶರಣಾಗಿದೆ.