News Karnataka Kannada
Tuesday, April 30 2024
ಕರ್ನಾಟಕ

ರಾಜ್ಯದ ಸಿಎಂ ಸ್ಥಾನ ಖಾಲಿ ಇಲ್ಲ ; ಡಿಸಿಎಂ ಅಶ್ವಥ ನಾರಾಯಣ್‌

Dcm Ashwath Narayan 12 7 21
Photo Credit :

ಧಾರವಾಡ: ರಾಜ್ಯದಲ್ಲಿ ಸಿಎಂ ಬದಲಾವಣೆ ಆದಲ್ಲಿ ಮುಂದಿನ ಸಿಎಂ ಉತ್ತರ ಕರ್ನಾಟಕದವರೇ ಆಗುತ್ತಾರೆ ಎನ್ನುವ ಸಚಿವ ಉಮೇಶ ಕತ್ತಿ ಹೇಳಿಕೆಗೆ, ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ, ಈಗ ಬದಲಾವಣೆಯ ಚರ್ಚೆಯೂ ಇಲ್ಲ ಎಂದು ಟಾಂಗ್ ನೀಡಿದ್ದಾರೆ.ಧಾರವಾಡದಲ್ಲಿ ಮಾತನಾಡಿದ ಅವರು, ಸುಮಲತಾ-ಎಚ್‍ಡಿಕೆ ವಾಕ್ ಸಮರ ಈಗಾಗಲೇ ಮುಗಿದು ಹೋಗಿರುವ ಅಧ್ಯಾಯ, ಅವರ ಮಧ್ಯೆ ಮಾತಿನ ಯುದ್ಧ ಮುಗಿದು ಹೋಗಿದೆ ಎಂದು ಹೇಳಿದರು. ಕೆಆರ್‍ಎಸ್‍ನಲ್ಲಿ ಯಾವುದೇ ಬಿರುಕು ಇಲ್ಲ ಎಂದು ವರದಿ ಹೇಳಿದೆ. ಅಂತಹ ಯಾವುದೇ ಸಂದರ್ಭ ಬಂದರೂ ಸರ್ಕಾರ ಬಗೆಹರಿಸುತ್ತದೆ ಹೇಳಿದ್ದಾರೆ.
ಯಡಿಯೂರಪ್ಪನವರೇ ಈಗ ಸಿಎಂ ಆಗಿದ್ದಾರೆ. ಸಿಎಂ ಸ್ಥಾನ ಈಗ ಭರ್ತಿಯಾಗಿಯೇ ಇದೆ, ಅವರೇ ಮುಂದುವರೆಯುತ್ತಾರೆ ಎಂದ ಅವರು, ಅವರು ಸಿಎಂ, ಇವರು ಸಿಎಂ ಎನ್ನುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಮ್ಮಲ್ಲಿ ಸಂಪೂರ್ಣ ಒಗ್ಗಟ್ಟಿದೆ ಎಂದಿದ್ದಾರೆ.ಅನೇಕ ನಾಯಕರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ದೆಹಲಿ ನಮ್ಮ ದೇಶದ ರಾಜಧಾನಿ, ನಮ್ಮ ಪಕ್ಷದ ಕೇಂದ್ರ ಕಚೇರಿ ಇದೆ. ಹೀಗಾಗಿ ಎಲ್ಲಿ ಬೇಕಾದರೂ ಹೋಗಿ ಯಾರನ್ನಾದರೂ ಮಾತನಾಡಿಸಿ ಬರಬಹುದು ಅದಕ್ಕೂ ಸಿಎಂ ಬದಲಾವಣೆಗೂ ಸಂಬಂಧ ಇಲ್ಲ ಎಂದು ಖಾರವಾಗಿ ನುಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು