ಮೈಸೂರು, ; ಮೈಸೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ವಾರಾಂತ್ಯ ಕರ್ಫ್ಯೂ ತೆಗೆಯಲಾಗಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿಂದು ಮಾತನಾಡಿದ ಸಚಿವರು ನಿನ್ನೆ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಮೈಸೂರಿನಲ್ಲಿ ತಿಂಗಳಲ್ಲಿ ಕೊರೋನಾ ಸೋಂಕು ಪ್ರಕರಣ, ನೂರು ದಾಟುತ್ತಿಲ್ಲ, ಸಾವು ಕಡಿಮೆ ಆಗುತ್ತಿದೆ ಮೈಸೂರು ಚಾಮರಾಜನಗರ ವಾರಾಂತ್ಯ ಕರ್ಫ್ಯೂ ತೆಗೆಯಲು ಮನವಿ ನೀಡಿದ್ದೆ. ಅದರಂತೆ ವಾರಾಂತ್ಯ ಕರ್ಫ್ಯೂ ತೆಗೆದಿದ್ದಾರೆ ಎಂದರು.
ದಸರಾ ಕುರಿತು ಪ್ರತಿಕ್ರಿಯಿಸಿ ದಸರಾ ಕುರಿತಂತೆ 3ನೇ ತಾರೀಖು ಸಭೆ ನಿಗದಿ ಮಾಡಿದ್ದು, ಅಲ್ಲಿ ಏನು ಯೋಜನೆ ರೂಪಿಸಬೇಕು ಎಂಬಿತ್ಯಾದಿಗಳ ಕುರಿತು ಕೂಲಂಕುಷವಾಗಿ ಚರ್ಚೆ ನಡೆಸಲಾಗುವುದು. ಅಲ್ಲಿ ನಿರ್ಧಾರ ತೆಗೆದುಕೊಳ್ಳೋಣ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದೇ ರೀತಿ ದಸರಾ ಕೂಡ ಒಂದು ತಿಂಗಳ, ಎರಡು ತಿಂಗಳ ಡಿಟೇಲ್ಸ್ ಎಲ್ಲವನ್ನು ತೆಗೆದು ದಸರಾ ಯಾವ ರೀತಿ ಮಾಡಬಹುದು, ಏನು ಎತ್ತ ಅಂತ ಚರ್ಚೆ ಮಾಡಲಾಗುವುದು ಎಂದರು.
ಗ್ಯಾಂಗ್ ರೇಪ್ ಪ್ರಕರಣ, ದರೋಡೆ, ಶೂಟೌಟ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ದಕ್ಷತೆ,ಪ್ರಾಮಾಣಿಕತೆ ,ಕರ್ತವ್ಯ ಮೆರೆದ ಪೊಲೀಸರಿಗೆ ಅಭಿನಂದನೆಗಳನ್ನು ತಿಳಿಸಿದರು. ಅದೇ ರೀತಿ ತಮಿಳುನಾಡಿನ ಪುಂಡು ಪೋಕರಿಗಳು ಮೈಸೂರಿಗೆ ಬಂದು ದರೋಡೆ ಮಾಡುತ್ತೇನೆ ರೇಪ್ ಮಾಡುತ್ತೇನೆ ಆಯಕಟ್ಟಿನ ಜಾಗ ಎಂದುಕೊಂಡಿದ್ದಲ್ಲಿ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಮೈಸೂರು ಸಾಂಸ್ಕೃತಿಕ ನಗರ. ಮೈಸೂರು ಜನತೆ ಏನು ವಿಶ್ವಾಸವಿಟ್ಟಿದ್ದಾರೋ ಅದಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೂ ಕೂಡ ಮನವಿ ಮಾಡಿದ್ದೇನೆ. ಪೊಲೀಸರು ಎಚ್ಚೆತ್ತು ಗಸ್ತು ತಿರುಗುವುದು, ಕ್ರಮ ತೆಗೆದುಕೊಳ್ಳುವುದು ಮಾಡಬೇಕು ಎಂದು ತಿಳಿಸಿದರು.
ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂ ತೆಗೆಯಲಾಗಿದೆ : ಸಚಿವ ಎಸ್.ಟಿ.ಸೋಮಶೇಖರ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.