ಪ್ಮುಂಬೈ: ಪ್ರವಾಹದಲ್ಲಿ ಸಿಲುಕಿಕೊಂಡ ರೈಲಿನಲ್ಲಿದ್ದ 700ಪ್ರಯಾಣಿಕರಲ್ಲಿ 500ಮಂದಿಯನ್ನು ಎನ್ ಡಿಆರ್ ಎಫ್ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡಿದ್ದಾರೆ.
ಮಹಾಲಕ್ಷ್ಮೀ ಎಕ್ಸ್ ಪ್ರೆಸ್ ರೈಲು ಭಾರೀ ಮಳೆಗೆ ಬದ್ಲಪುರ್ ನಲ್ಲಿ ಪ್ರವಾಹಕ್ಕೆ ಸಿಲುಕಿದೆ. ಇದರಿಂದ ಮುಂದೆ ಚಲಾಯಿಸಲು ಸಾಧ್ಯವಾಗದೆ ಮಧ್ಯರಾತ್ರಿ ರೈಲು ಅಲ್ಲೇ ನಿಲುಗಡೆಯಾಗಿದೆ. ಕೂಡಲೇ ರೈಲು ಅಧಿಕಾರಿಗಳು ಎನ್ ಡಿಆರ್ ಎಫ್ ಕರೆ ಮಾಡಿ ರಕ್ಷಣೆ ಕೋರಿದ್ದಾರೆ.
ಒಟ್ಟು ರೈಲಿನಲ್ಲಿ 700 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದೀಗ ಅದರಲ್ಲಿ 500 ಮಂದಿಯನ್ನು ಎನ್ ಡಿಆರ್ ಎಫ್ ರಕ್ಷಣೆ ಮಾಡಿದೆ.