ಕಾಸರಗೋಡು: ಮೀನುಗಾರಿಕೆ ಸಂದರ್ಭದಲ್ಲಿ ಸಮುದ್ರಕ್ಕೆಸೆಯಲ್ಪಟ್ಟು ಬೆಸ್ತನೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಬಂದ್ಯೋಡು ಸಮೀಪದ ಸಮುದ್ರದಲ್ಲಿ ನಡೆದಿದೆ.
ಮೃತಪಟ್ಟವರನ್ನು ಉಪ್ಪಳ ಗೇಟ್ ಬಳಿಯ ಅಬ್ದುಲ್ಲ(60) ಎಂದು ಗುರುತಿಸಲಾಗಿದೆ.
ಉಳಿದ ಬೆಸ್ತರು, ಸ್ಥಳೀಯರು ಶೋಧ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೀನು ಹಿಡಿಯಲು ಬಲೆ ಬೀಸುತ್ತಿದ್ದಾಗ ಸಮುದ್ರಕ್ಕೆಸೆಯಲ್ಪಟ್ಟು ಈ ದುರ್ಘಟನೆ ನಡೆದಿದೆ. ಮೃತದೇಹವನ್ನು ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಿಟ್ಟು ಕೊಡಲಾಯಿತು.